SHOCKING ‌NEWS: ʻಅಗ್ನಿವೀರ್ʼ ಪರೀಕ್ಷೆಯಲ್ಲಿ ಫೇಲ್: ಮನನೊಂದು ಉತ್ತರಾಖಂಡ್‌ನ ಯುವಕ ಆತ್ಮಹತ್ಯೆಗೆ ಶರಣು

ಡೆಹ್ರಾಡೂನ್(ಉತ್ತರಾಖಂಡ್‌):23 ವರ್ಷದ ಸೇನಾ ಆಕಾಂಕ್ಷಿಯೊಬ್ಬರು ʻಅಗ್ನಿವೀರ್(Agniveer)ʼ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಾಖಂಡ್‌ನ ಪೌರಿ ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ಸಾತ್ಪುಲಿ ನಿವಾಸಿ ಸುಮಿತ್ ಕುಮಾರ್ ಎಂದು ಗುರುತಿಸಲಾಗಿದೆ. ಕೋಟ್ವಾರ್‌ನಲ್ಲಿ ನಡೆದ ಅಗ್ನಿವೀರ್ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಹಿನ್ನೆಲೆಯಲ್ಲಿ ಸುಮಿತ್ ಅಸಮಾಧಾನಗೊಂಡಿದ್ದರು. ಬುಧವಾರ ಸಂಜೆ ಸುಮಿತ್ ನೌಗಾಂವ್ ಕಮಂದ ಗ್ರಾಮದಲ್ಲಿನ ಮನೆಗೆ ಮರಳಿದ್ದರು. ಗುರುವಾರ ಬೆಳಗ್ಗೆ 6.45ಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸುಮಿತ್ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. … Continue reading SHOCKING ‌NEWS: ʻಅಗ್ನಿವೀರ್ʼ ಪರೀಕ್ಷೆಯಲ್ಲಿ ಫೇಲ್: ಮನನೊಂದು ಉತ್ತರಾಖಂಡ್‌ನ ಯುವಕ ಆತ್ಮಹತ್ಯೆಗೆ ಶರಣು