ಉತ್ತರಾಖಂಡ ಹಿಮಪಾತ: 46 ಕಾರ್ಮಿಕರ ರಕ್ಷಣೆ, 8 ಜನರು ಸಾವು, ಶೋಧ ಕಾರ್ಯಾಚರಣೆ ಅಂತ್ಯ | Uttarakhand avalanche

ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ( Border Roads Organisation -BRO) ಯೋಜನೆಯ ಸ್ಥಳದಲ್ಲಿ ಭಾನುವಾರ ಇನ್ನೂ ನಾಲ್ಕು ಶವಗಳು ಪತ್ತೆಯಾಗಿವೆ. ಹೀಗಾಗಿ ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಹಿಮಪಾತವು ಕಾರ್ಮಿಕರು ವಾಸಿಸುವ ವಸತಿಗೃಹಗಳಾಗಿ ಬಳಸುತ್ತಿದ್ದ ಕಂಟೇನರ್ ಗಳನ್ನು ಹೂಳಿದಾಗ ಯೋಜನಾ ಸ್ಥಳದಲ್ಲಿ 54 ಕಾರ್ಮಿಕರು ಇದ್ದರು. ಮೃತಪಟ್ಟ ಎಂಟು ಮಂದಿಯನ್ನು ಹೊರತುಪಡಿಸಿ, ಉಳಿದವರೆಲ್ಲರನ್ನೂ ರಕ್ಷಿಸಲಾಗಿದೆ ಅಥವಾ ಸುರಕ್ಷಿತವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಶೋಧ ಕಾರ್ಯಾಚರಣೆ ಅಂತ್ಯಗೊಂಡಿದೆ. ಈ ಬಗ್ಗೆ ಭಾರತೀಯ ಸೇನೆಯ ಎಡಿಜಿಪಿಐ … Continue reading ಉತ್ತರಾಖಂಡ ಹಿಮಪಾತ: 46 ಕಾರ್ಮಿಕರ ರಕ್ಷಣೆ, 8 ಜನರು ಸಾವು, ಶೋಧ ಕಾರ್ಯಾಚರಣೆ ಅಂತ್ಯ | Uttarakhand avalanche