UPDATE : ಉತ್ತರ ಪ್ರದೇಶದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 80ಕ್ಕೂ ಹೆಚ್ಚು ಮಂದಿ ಬಲಿ

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಮಂಗಳವಾರ ನಡೆದ ‘ಸತ್ಸಂಗ’ (ಧಾರ್ಮಿಕ ಕಾರ್ಯಕ್ರಮ) ದಲ್ಲಿ ಕಾಲ್ತುಳಿತದಲ್ಲಿ 80 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಮೃತ ದೇಹಗಳನ್ನ ಹತ್ರಾಸ್ ಮತ್ತು ನೆರೆಯ ಇಟಾ ಜಿಲ್ಲೆಯ ಆಸ್ಪತ್ರೆಗಳಿಗೆ ಕೊಂಡಯ್ಯಲಾಗಿದೆ. ಹತ್ರಾಸ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ತಮ್ಮ ಜಿಲ್ಲೆಯಲ್ಲಿ ಸುಮಾರು 60 ಜನರ ಸಾವುಗಳನ್ನ ದೃಢಪಡಿಸಿದರೆ, ಇಟಾದ ಅಧಿಕಾರಿಗಳು ಅಲ್ಲಿನ ಆಸ್ಪತ್ರೆಗಳಿಂದ ಇನ್ನೂ 27 ಸಾವುಗಳು ವರದಿಯಾಗಿವೆ ಎಂದು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ … Continue reading UPDATE : ಉತ್ತರ ಪ್ರದೇಶದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 80ಕ್ಕೂ ಹೆಚ್ಚು ಮಂದಿ ಬಲಿ