ಜಾರ್ಖಂಡ್‌ನಲ್ಲಿ ಘೋರ ದುರಂತ: ಸರ್ಕಾರಿ ಶಾಲೆಯಲ್ಲಿ ಬಿಸಿ ಗಂಜಿಯಿಟ್ಟಿದ್ದ ಟಬ್‌ಗೆ ಬಿದ್ದು ಅಕ್ಕ-ತಂಗಿ ಸಾವು

ಜಾರ್ಖಂಡ್‌: ಜಾರ್ಖಂಡ್‌ನ ಪಲಾಮು ಜಿಲ್ಲೆಯ ತರ್ಹಾಸಿ ಬ್ಲಾಕ್‌ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಬೇಯಿಸಿದ ಅನ್ನ ಬಸಿದು ಟಬ್‌ನಲ್ಲಿಟ್ಟಿದ್ದ ಗಂಜಿಗೆ ಬಿದ್ದು ಸಹೋದರಿಯರಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಲಿಯಾದ ಇಬ್ಬರೂ ಸ್ಥಳೀಯ ಗ್ರಾಮದ ಪರಮೇಶ್ವರ ಸಾಹು ಎಂಬುವವರ ಪುತ್ರಿಯರಾಗಿದ್ದು, ಚಿಕಿತ್ಸೆಗಾಗಿ ರಾಂಚಿಯ RIMS ಗೆ ದಾಖಲಿಸಲಾಗಿತ್ತು. ಆದ್ರೆ, ಮಂಗಳವಾರ ಸಂಜೆ ಕಿರಿಯ ಸಹೋದರಿ ಸೌಂದರ್ಯ ಕುಮಾರಿ ಮೃತಪಟ್ಟರೆ, ಹಿರಿಯ ಶಿಬು ಬುಧವಾರ ರಾಂಚಿ ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ ಎಂದು ತಾರ್ಸಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಚ್ಚಿದಾನಂದ ಮಹತೋ … Continue reading ಜಾರ್ಖಂಡ್‌ನಲ್ಲಿ ಘೋರ ದುರಂತ: ಸರ್ಕಾರಿ ಶಾಲೆಯಲ್ಲಿ ಬಿಸಿ ಗಂಜಿಯಿಟ್ಟಿದ್ದ ಟಬ್‌ಗೆ ಬಿದ್ದು ಅಕ್ಕ-ತಂಗಿ ಸಾವು