ಬೆಂಗಳೂರು: ಯುಪಿಎಸ್ಸಿ ಪರೀಕ್ಷೆಯಲ್ಲಿ 569ನೇ ಸ್ಥಾನ ಗಳಿಸಿ, ಪಾಸ್ ಮಾಡಿ, ಐಪಿಎಸ್ ಆಗಿ ಸೇರ್ಪಡೆ ಆಗಿರುವಂತ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕನಿಗೆ ಇಂದು ಕೆ ಎಸ್ ಆರ್ ಟಿ ಸಿಯಿಂದ ( KSRTC ) ಸನ್ಮಾನಿಸಿ, ಗೌರವಿಸಿದರು.
ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗದ ಭಾಲ್ಕಿ ಘಟಕದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಮಾಣಿಕ್ ರಾವ್ ಅವರ ಪುತ್ರ ಅನುರಾಗ್ ಭಾರತೀಯ ಆಡಳಿತ ಸೇವೆಯ ಪರೀಕ್ಷೆಯಲ್ಲಿ 569ನೇ ಸ್ಥಾನ ಪಡೆದು ಐಪಿಎಸ್ ಆಗಿ ಆಯ್ಕೆಯಾಗಿದ್ದರು. ಇಂತಹ ಕೆ ಎಸ್ ಆರ್ ಟಿಸಿ ಚಾಲಕ ಮಾಣಿಕ್ ರಾವ್, ಅವರ ಪುತ್ರ ಅನುರಾಗ್ ಹಾಗೂ ಅವರ ತಾಯಿ ಕಾಶಿಬಾಯಿಗೆ ಇಂದು ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಎಂ.ಚಂದ್ರಪ್ಪ, ವ್ಯವಸ್ಥಾಪಕ ನಿರ್ದೇಶಕರಾದಂತ ಅನ್ಬುಕುಮಾರ್ ಆತ್ಮೀಯವಾಗಿ ಸನ್ಮಾನಿಸಿದರು.
BREAKING NEWS: ನಟ ದಿಗಂತ್ ಆರೋಗ್ಯವಾಗಿದ್ದಾರೆ, ಇಂದು ಅಥವಾ ನಾಳೆ ಡಿಸ್ಚಾರ್ ಆಗಲಿದ್ದಾರೆ – ಪತ್ನಿ ಐಂದ್ರಿತಾ ರೇ
ಈ ವೇಳೆ ಮಾತನಾಡಿದಂತ ಕೆ ಎಸ್ ಆರ್ ಟಿ ಸಿ ಚಾಲಕ ಮಾಣಿಕ್ ರಾವ್, ನಾನು ಚಾಲಕ , ನಿರ್ವಾಹಕ ಅಥವಾ ಮೆಕ್ಯಾನಿಕ್ ಆಗಿರಬಹುದು. ಆದರೆ ನನ್ನ ಮಗ/ ಮಗಳು ವೈದ್ಯ/ ಇಂಜಿನಿಯರ್ ಎಲ್ಲದಕ್ಕೂ ಹೆಚ್ಚಾಗಿ IAS ಆಗಬೇಕೆಂಬ ಮಹದಾಸೆ ಪ್ರತಿಯೊಬ್ಬರ ಕನಸಾಗಿರುತ್ತದೆ. ಈ ಕನಸನ್ನು ನನ್ನ ಮಗ ಅನುರಾಗ್ ನನಸು ಮಾಡಿದ್ದಾರೆ. ಇದು ನಮ್ಮ ಸಂಸ್ಥೆಯ ಹೆಮ್ಮೆ ಕೂಡ ಆಗಿದೆ ಎಂಬುದಾಗಿ ಹರ್ಷ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶಾಸಕರು ಹಾಗೂ ಕೆ ಎಸ್ ಆರ್ ಟಿ ಸಿ ಅಧ್ಯಕ್ಷರಾದ ಎಂ.ಚಂದ್ರಪ್ಪ ಮಾತನಾಡಿ, ನಮ್ಮ ಚಾಲನಾ ಸಿಬ್ಬಂದಿಗಳು ಹಗಲಿರುಳು ಬಸ್ಸುಗಳನ್ನು ಚಾಲನೆ ಮಾಡುತ್ತಾ, ಕಷ್ಟಪಟ್ಟು ದುಡಿಯುತ್ತಿರುತ್ತಾರೆ.ಅಂತಹ ಸಂದರ್ಭದಲ್ಲಿಯೂ ಅವರ ಮಕ್ಕಳಿಗೆ ಅತ್ಯುನ್ನತ ವಿದ್ಯಾಭ್ಯಾಸ ನೀಡಿಸುವಲ್ಲಿ ಸಫಲರಾಗಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಮಾದರಿಯಾದದದ್ದು. ಅವರ ತಂದೆ ಮಾಣಿಕ್ ರಾವ್, ತಾಯಿ ಕಾಶಿಬಾಯಿ ಅವರಿಗೆ ಅನಂತ ಅಭಿನಂದನೆಗಳು. ಅನುರಾಗ್ ಅವರು ತಮ್ಮ ಆಡಳಿತದಲ್ಲಿ ಸಮಾಜದ ಕೆಳಮಟ್ಟದ ಪ್ರತಿಯೊಬ್ಬ ಪ್ರಜೆಯ, ನೊಂದರವರ ಕೂಗಿಗೆ ಧ್ಬನಿಯಾಗಬೇಕು ಎಂದರು.
ಇನ್ನೂ ಕೆ ಎಸ್ ಆರ್ ಟಿ ಸಿಯ ವ್ಯವಸ್ಥಾಪಕ ನಿರ್ದೇಶಕರು ಬೆಳಿಗ್ಗೆ 9 ಗಂಟೆಗೆ ಕಛೇರಿಗೆ ಬಂದು ತಮ್ಮ ಕರ್ತವ್ಯವನ್ನು ಪ್ರಾರಂಭಿಸುತ್ತಾರೆ. ಇಂತಹ ಅಧಿಕಾರಿಗಳು ಸಮಾಜಕ್ಕೆ ಮಾದರಿ. ಯಾರೋ ನಮ್ಮನ್ನು ಕೇಳುತ್ತಾರೆ ಎಂದು ಕಾರ್ಯ ನಿರ್ವಹಿಸಬಾರದು. ನಾವೇ ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದ್ದಲ್ಲಿ ನಮ್ಮಿಂದ ಸಮಾಜಕ್ಕೆ ಒಳಿತಾಗುತ್ತದೆ ಅದು ಅನುರಾಗ್ ಅವರಿಂದ ಆಗಲಿ ಎಂದು ಆಶಿಸಿದರು.
ಈ ಬಳಿಕ ಮಾತನಾಡಿದಂತ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಭಾರತೀಯ ಆಡಳಿತ ಸೇವೆ ( IAS) ಮಾಡಬೇಕೆಂಬುದು ಬಹಳಷ್ಟು ಮಂದಿಯ ಕನಸ್ಸಾಗಿದ್ದರೂ ಅದು ಒಂದು ತಪಸ್ಸು, ಸತತ ಪರಿಶ್ರಮ, ಶ್ರದ್ಧೆಯ ಮೂಲಕ ನಿರಂತರ, ನಿಯಮ ಬದ್ಧ ಕಲಿಕೆಯ ಸಾಧನೆ. ನಮ್ಮ ಚಾಲಕರ ಮಗ ಮಾಡಿರುವ ಈ ಸಾಧನೆ, ನಮ್ಮ ಸಂಸ್ಥೆಯ ಹೆಮ್ಮೆ ಹಾಗೂ ಗೌರವವಾಗಿದೆ ಎಂದರು.
ಶಿವಮೊಗ್ಗ: ನಾಳೆ ಸೊರಬ ತಾಲೂಕಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಮುಂದುವರೆಸಿ ಮಾತನಾಡುತ್ತಾ, ಮಾನ್ಯ ಅಧ್ಯಕ್ಷರು ತಿಳಿಸಿದಂತೆ ನೀವು ಸಮಾಜಕ್ಕೆ ಮಾದರಿಯಾಗುವಂತಹ ಕೆಲಸ ನಿರ್ವಹಿಸಿ, ನಿಮ್ಮ ಈ ಸಾಧನೆಗೆ ನಿಮ್ಮ ತಂದೆ ತಾಯಿಯ ಪಾತ್ರ ಬಹಳ ಹಿರಿದು. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಸಂಸ್ಥೆಯ ಬಹಳಷ್ಟು ಚಾಲಕ ನಿರ್ವಾಹಕ ಹಾಗೂ ಮೆಕ್ಯಾನಿಕ್ ಗಳ ಮಕ್ಕಳು ಇಂಜಿನಿಯರಿಂಗ್, ಮೆಡಿಕಲ್, IIT, IIM, MS, Navy ಯಲ್ಲಿದ್ದಾರೆಂಬುದು ಅತ್ಯಂತ ಸಂತೋಷ ಹಾಗೂ ಅಭಿಮಾನದ ವಿಷಯ. ಇದು ಹೀಗೆ ಮುಂದುವರೆಯಲಿ. ಅನುರಾಗ್ ಅವರು ಸಮಾಜ ಪರ ಕಾರ್ಯದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಡಾ.ನವೀನ್ ಭಟ್ ವೈ, ಭಾಆಸೇ, ನಿರ್ದೇಶಕರು (ಸಿಬ್ಬಂದಿ & ಭದ್ರತಾ ), ಮಾಣಿಕ್ ರಾವ್ ಚಾಲಕರು, ( ಅನುರಾಗ್ ಅವರ ತಂದೆ) ಶ್ರೀಮತಿ ಕಾಶಿಬಾಯಿ (ಅನುರಾಗ್ ಅವರ ತಾಯಿ) ಅವರ ಸಂಬಂಧಿಕರು ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ: ಜೂನ್ 24, 25ರಂದು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut