ಹಾವೇರಿ: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ತಿಪ್ಪರಲಾಗ ಹಾಕಿದ್ರೂ ಅಧಿಕಾರಕ್ಕೆ ಬರೋದಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿನೇ ಅಧಿಕಾರಕ್ಕೆ ಬರೋದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಜನರನ್ನು ಹುರಿದುಂಬಿಸುವ ಕೆಲಸ ಮಾಡುತ್ತಾ ಇದ್ದೇವೆ. ಸ್ವಾತಂತ್ರ್ಯ ಬಂದ ಬಳಿಕ ನೆಹರೂ, ಇಂದಿರಾ ಗಾಂಧಿ ಕಾಲ ಬಿಟ್ಟರೆ ಸ್ಪಷ್ಟ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದು ಮೋದಿಯವರು. ಸುಳ್ಳು ಆರೋಪ ನಾವು ಮಾಡಲ್ಲ. ಕಾಂಗ್ರೆಸ್ನವರು ಕೆಲವರನ್ನು ಉಪಯೋಗ ಮಾಡಿಕೊಂಡು ಆರೋಪ ಮಾಡುತ್ತಾ ಇದ್ದಾರೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ನವರು 60 ವರ್ಷ ಮಾಡಿದ್ದು ಹೇಳಿ ಎಂದರೆ ಏನೂ ಹೇಳಲ್ಲ. ಕೆಂಪಣ್ಣನನ್ನು ಹಿಡಿದುಕೊಂಡು ಬಿಳಿ ಹಾಳೆ ಅರ್ಜಿ ಕೊಡಿಸಿದ್ದಾರೆ. ಕಾಂಗ್ರೆಸ್ನವರು ಹಾದಿ ಬೀದಿಯಲ್ಲಿ ಜೋಗುಳ ಹಾಡಿಕೊಂಡು ತಿರುಗುತ್ತಾರೆ ಎಂದರು.
BIGG NEWS: ಬಾದಾಮಿ, ಚಾಮುಂಡೇಶ್ವರಿ, ಕೋಲಾರ ಯಾವುದೂ ಸ್ಪಷ್ಟತೆ ಇಲ್ಲ ಎನ್ನುವುದು ಗೊತ್ತಾಗುತ್ತಿದೆ: ಸಿ.ಟಿ ರವಿ
BIGG NEWS: 108 ಅಡಿ ಎತ್ತರದ ಮಾದಪ್ಪನ ಪ್ರತಿಮೆಯನ್ನು ಉದ್ಘಾಟಿಸಿದ ಸಿಎಂ ಬಸವರಾಜ ಬೊಮ್ಮಾಯಿ