ಝಾನ್ಸಿ: ರೋಗಿಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೊಟ್ಟೆಯಲ್ಲಿರುವ ಟವೆಲ್, ಉಪಕರಣಗಳನ್ನು ಮರೆತುಬಿಡುವ ಸಾಕಷ್ಟು ಕಥೆಗಳನ್ನು ನೀವು ಕೇಳಿರಬಹುದು. ಈಗ ಝಾನ್ಸಿಯಲ್ಲಿ ವೈದ್ಯರ ನಿರ್ಲಕ್ಷ್ಯದ ದೊಡ್ಡ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಯುವತಿಯ ಕೈಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ವೈದ್ಯರಿಗೆ ಹಸಿವಾಯಿತು ಎನ್ನುವ ಕಾರಣಕ್ಕೆ ಆಪರೇಶನ್‌ ಮಾಡುವುದನ್ನು ಬಿಟ್ಟು ಮಸಾಲೆ ದೋಸೆ ತಿನ್ನಲು ಹೋದ ಘಟನೆ ನಡೆದಿದೆ.

ಇದಾದ ನಂತರ, ಬಾಲಕಿ ಆಪರೇಷನ್ ಥಿಯೇಟರ್ನಲ್ಲಿ ಮಲಗಿದ್ದಳು, ಸುಮಾರು 2 ಗಂಟೆಗಳ ನಂತರ ಹಿಂದಿರುಗಿದ ನಂತರ, ವೈದ್ಯರು ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದ ಎನ್ನಲಾಗಿದೆ. ಇನ್ನೂ ವೈದ್ಯರ ಈ ನಿರ್ಲಕ್ಷ್ಯದಿಂದಾಗಿ ತನ್ನ ಬೆರಳುಗಳು ವಕ್ರವಾಗಿವೆ ಎಂದು ಬಾಲಕಿ ಆರೋಪಿಸಿದ್ದಾರೆ. ನಂತರ, ಅವಳು ವೈದ್ಯರನ್ನು ಭೇಟಿಯಾಗಲು ಹೋದಾಗ, ಅವನು ಬಾಲಕಿಯನ್ನು ಭೇಟಿಯಾಗಲು ನಿರಾಕರಿಸಿದ್ದಾರೆ ಎನ್ನಾಗಿದೆ. . ಮಹಿಳೆ ಗುರ್ಗಾಂವ್ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ವೇಳೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಘಟನೆ ಸಂಬಂಧ ಪೊಲೀಸ್ ಮತ್ತು ಸಿಎಂಒಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅವರು ಈಗ ಸಿಎಂಗೆ ಮನವಿ ಮಾಡಲಿದ್ದಾರೆ.

Share.
Exit mobile version