ಬೆಂಗಳೂರು : ಬಾಲಕಿ ಮತ್ತು ಯುವತಿಯರಿಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಬೀದಿ ಕಾಮಣ್ಣನಿಗೆ ಅಪರಾಧಿಗೆ 3 ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.

2019ರ ಆಗಸ್ಟ್ 14ರಂದು ಜಯನಗರ 4ನೇ ಬ್ಲಾಕ್ ವಾಟರ್ ಟ್ಯಾಂಕ್ ಬಳಿಯ ಪಾದಚಾರಿ ಮಾರ್ಗದಲ್ಲಿ ಉತ್ತರಹಳ್ಳಿಯ ಚಿಕ್ಕಲ್ಲಸಂದ್ರ ನಿವಾಸಿ ಟಿ. ಕಾಂತರಾಜ್ ಎನ್ನುವ ಆರೋಪಿ ತನ್ನ ಎದುರು ಬಂದ ಬಾಲಕಿಯ ಮೈಗೆ ಮೈ ತಾಗಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಘಟನೆ ನಡೆದ ವೇಳೆಯಲ್ಲಿ ಸ್ಥಳದಲ್ಲಿದ್ದ ಸಾರ್ವಜನಿಕರ ನೆರವಿನಿಂದ ಆತನನ್ನು ಹಿಡಿದು ಹೊಯ್ಸಳ ಸಿಬ್ಬಂದಿ ಮಾಹಿತಿ ನೀಡಿ, ಪೋಲಿಸರಿಗೆ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಜಯನಗರ ಪೋಲಿಸರು ತನಿಖೆ ನಡೆಸಿ ಕಾಂತರಾಜ್ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪದ ಪರ-ವಿರುದ್ದ ಅರ್ಜಿ ಆಲಿಸಿದ . ನ್ಯಾ.ಕೆ.ಎನ್. ರೂಪಾರಿದ್ದ ನ್ಯಾಯಪೀಠ ಆರೋಪಿಕಾಂತರಾಜ್ ಅಪರಾಧಿ ಎಂದು ಘೋಷಣೆ ಮಾಡಿ, ಮೂರು ವರ್ಷ ಜೈಲು ಶಿಕ್ಷೆ, 5 ಸಾವಿರ ರೂ. ದಂಡ ಮತ್ತು ನೊಂದ ಬಾಲಕಿಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.

Share.
Exit mobile version