ಮಡಿಕೇರಿ : ಮಡಿಕೇರಿಯಲ್ಲಿ ಇಡೀ ಜಿಲ್ಲೆಯೇ ಬೆಚ್ಚಿ ಬೆಳೆಸುವಂತಹ ಘಟನೆ ನಡೆದಿದ್ದು ನಿನ್ನೆ 10ನೇ ತರಗತಿಯ ರಿಸಲ್ಟ್ ಬಂದಿದ್ದು,ಈ ವೇಳೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ ಇದೀಗ ಬರ್ಬರವಾಗಿ ಹತ್ಯೆ ಆಗಿದ್ದಾಳೆ. ಆಕೆಯ ರುಂಡ ಕತ್ತರಿಸಿ ಹತ್ಯೆ ಮಾಡಲಾಗಿದೆ.

ಹೌದು ಕೊಲೆಯಾದ ಬಾಲಕಿಯನ್ನು ಮೀನಾ (16) ಎಂದು ಹೇಳಲಾಗುತ್ತಿದ್ದು, ನಿನ್ನೆ ಬೆಳಗ್ಗೆ ರಿಸಲ್ಟ್ ಬಂದಿದ್ದು, ಮಧ್ಯಾಹ್ನ ಓಂಕಾರಪ್ಪ ಎನ್ನುವ ವ್ಯಕ್ತಿಯ ಜೊತೆ ನಿಶ್ಚಿತರ್ಥವಾಗಿತ್ತು. ಆದರೆ ಬಾಲಕಿಗೆ ಇನ್ನು 18 ವರ್ಷ ತುಂಬಿಲ್ಲವಾದ್ದರಿಂದ ಮಾಹಿತಿ ತಿಳಿದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೌನ್‌ಸಿಲಿಂಗ್‌ ಮಾಡಿ, ಎಂಗೇಜ್ಮೆಂಟ್ ತಡೆದಿದ್ದರು.

ಇದರಿಂದ ಸಿಟ್ಟಿಗೆದ್ದ ಆರೋಪಿ ಓಂಕಾರಪ್ಪ ಸಂಜೆ ಬಾಲಕಿಯ ಮನೆಗೆ ಹೋಗಿ ಅವರ ಪೋಷಕರ ಜೊತೆ ಜಗಳವಡಿದ್ದಲ್ಲದೆ ಬಾಲಕಿಯನ್ನ ಹೊರಗೆ ಎಳೆದು ತಂದು ಕುತ್ತಿಗೆ ಕತ್ತರಿಸಿದ್ದಾನೆ. ಬಾಲಕಿಯ ರುಂಡ ಕತ್ತರಿಸಿ ರುಂಡ ಸಮೇತ ಆರೋಪಿ ಎಸ್ಕೇಪ್ ಆಗಿದ್ದಾನೆ.

ಸೋಮವಾರಪೇಟೆ ತಾಲೂಕಿನ ಮುಟ್ಲು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮೀನಾಳ ಹತ್ಯೆ ಪ್ರಕರಣ ಸಂಬಂಧ ಕೊಡಗು ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಪರೀಕ್ಷೆ ಪಾಸಾದ ಸಂತಸದಲ್ಲಿದ್ದ ಆಕೆಯನ್ನು ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಯಾನೆ ಪಾಪು (34) ಮೀನಾಳ ತಲೆ ಕತ್ತರಿಸಿ ಭೀಕರ ಹತ್ಯೆ ಮಾಡಿದ್ದಾನೆ.

ಸ್ಥಳಕ್ಕೆ ಕೊಡಗು ಎಸ್ಪಿ ಭೇಟಿ, ಪರಿಶೀಲನೆ ನಡೆಸಿದ್ದು, ಆರೋಪಿ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಅಪ್ರಾಪ್ತ ಬಾಲಕಿಯ ತಂದೆ ಸುಬ್ರಹ್ಮಣಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share.
Exit mobile version