ಖರ್ಗೆಗೆ ‘AICC’ ಅಧ್ಯಕ್ಷ ಸ್ಥಾನ : ‘ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎನ್ನುವಂತಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

ಮೈಸೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಂಸದ ವಿ ಶ್ರೀನಿವಾಸ ಪ್ರಸಾದ್ ಟೀಕೆ ಮಾಡಿದ್ದು, ಖರ್ಗೆಗೆ ರಾಜಕೀಯ ಹೋರಾಟದ ಹಿನ್ನೆಲೆಯೇ ಇಲ್ಲ ಎಂದು ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀನಿವಾಸ ಪ್ರಸಾದ್ ಖರ್ಗೆಗೆ ಯಾವ ಹೋರಾಟದ ಹಿನ್ನೆಲೆ ಇದೆ, ಕಾಂಗ್ರೆಸ್ ಪಕ್ಷಕ್ಕೆ ಹಾಳೂರಿಗೆ ಉಳಿದವೇ ಗೌಡ ಎಂಬಂತೆ ಖರ್ಗೆ ಸಿಕ್ಕಿದ್ದಾರೆ ಎಂದು ವ್ಯಂಗ್ಯವಾಡಿದರು. ಖರ್ಗೆ ಅವರು ರಾಜಕೀಯವಾಗಿ ಹೋರಾಟ ಮಾಡಿ ಬಂದವರಲ್ಲ ಎಂದು ಟೀಕಿಸಿದರು. ಇ ತಹವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದಿರುವುದು … Continue reading ಖರ್ಗೆಗೆ ‘AICC’ ಅಧ್ಯಕ್ಷ ಸ್ಥಾನ : ‘ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎನ್ನುವಂತಾಗಿದೆ ಎಂದು ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ