ನವದೆಹಲಿ : ಶೀಘ್ರದಲ್ಲೇ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು, ಇದೀಗ ಸ್ವತಹ ಸೌರವ್ ಗಂಗೂಲಿಯ ಮಾತುಗಳು ಇದಕ್ಕೆ ಹೆಚ್ಚು ಪುಷ್ಟೀಕರಣ ನೀಡಿದೆ.

ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ರಾಜೀನಾಮೆ ನೀಡಲಿದ್ದು,  ರೋಜರ್ ಬಿನ್ನಿ ಅವರ ಸ್ಥಾನವನ್ನು ತುಂಬಲಿದ್ದಾರೆ  ಎನ್ನಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಇದೀಗ ಗಂಗೂಲಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಶಾಶ್ವತವಾಗಿ ಆಡಳಿತಗಾರರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಮೂರು ವರ್ಷಗಳ ಕಾಲ ಬಿಸಿಸಿಐ ಅಧ್ಯಕ್ಷನಾಗಿದ್ದೇನೆ. ನಾನು ಈಗ ಬೇರೆ ಏನನ್ನಾದರೂ ಮಾಡಲು ಹೋಗುತ್ತೇನೆ. ನನ್ನ 15  ವರ್ಷಗಳ ಕ್ರಿಕೆಟ್ ವೃತ್ತಿಜೀವನವು ಅತ್ಯುತ್ತಮವಾಗಿತ್ತು. ಕ್ರಿಕೆಟರ್ ಆಗಿ ಸವಾಲು ಬಹಳಷ್ಟಿದೆ. ಒಬ್ಬ ನಿರ್ವಾಹಕನಾಗಿ, ನೀವು ತುಂಬಾ ಕೊಡುಗೆ ನೀಡಬೇಕು. ನೀವು ತಂಡಕ್ಕೆ ವಿಷಯಗಳನ್ನು ಉತ್ತಮಗೊಳಿಸಬೇಕು. ದೀರ್ಘಕಾಲದವರೆಗೆ ಆಡಿದ ಆಟಗಾರನಾಗಿ ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ.  ಬಳಿಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲೂ ಕಾರ್ಯನಿರ್ವಹಿಸಿದ ನಾನು ನಂತರ ಬಿಸಿಸಿಐನ ಚುಕ್ಕಾಣಿಯನ್ನೂ ಹಿಡಿದಿದ್ದೆ. ಈಗ ನನ್ನ ಗಮನವನ್ನು ಬೇರೆ ಕೆಲಸದ ಮೇಲೆ ಹರಿಸಲು ಮುಂದಾಗಿದ್ದೇನೆ ಎಂದಿದ್ದಾರೆ.

1983 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಭಾರತದ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಗಂಗೂಲಿ ಅವರ ಉತ್ತರಾಧಿಕಾರಿಯಾಗಲು ಸಜ್ಜಾಗಿದ್ದಾರೆ. ಗಂಗೂಲಿ ಭಾರತೀಯ ಕ್ರಿಕೆಟ್ ಮಂಡಳಿಯಿಂದ ಹೊರಹೋಗಹಲು  ಸಜ್ಜಾಗುತ್ತಿದ್ದಂತೆ, ಜಯ್ ಶಾ ಮಂಡಳಿಯ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ಗಂಗೂಲಿ ಅವರೊಂದಿಗೆ, ಮಂಡಳಿಯಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಸುದೀರ್ಘ ಚರ್ಚೆಯ ನಂತರ 67 ವರ್ಷ ವಯಸ್ಸಿನ ಬಿನ್ನಿ ಬಿಸಿಸಿಐನ 36 ನೇ ಅಧ್ಯಕ್ಷರಾಗುವ ಸಾಧ್ಯತೆಯಿದೆ. ಬಿನ್ನಿ ಅಕ್ಟೋಬರ್ 18  ರಂದು ಮುಂಬೈನಲ್ಲಿ ನಡೆಯಲಿರುವ ಎಜಿಎಂನಲ್ಲಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಈ  ಬಗ್ಗೆ ಅನುಮಾನ ಮೂಡುವಂತೆ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿ, ಇದುವರೆಗಿನ ಪ್ರಯಾಣಕ್ಕಾಗಿ ಅವರು ಅಭಿಮಾನಿಗಳು ಮತ್ತು ಸಹ ಆಟಗಾರರಿಗೆ ಧನ್ಯವಾದ ತಿಳಿಸಿದ್ದರು.

 “1992 ರಲ್ಲಿ ಕ್ರಿಕೆಟ್‌ನೊಂದಿಗೆ ನನ್ನ ಪ್ರಯಾಣದ ಪ್ರಾರಂಭದಿಂದ 2022 30 ನೇ ವರ್ಷವನ್ನು ಸೂಚಿಸುತ್ತದೆ. ಅಂದಿನಿಂದ, ಕ್ರಿಕೆಟ್ ನನಗೆ ಬಹಳಷ್ಟು ನೀಡಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ನನಗೆ ನಿಮ್ಮೆಲ್ಲರ ಬೆಂಬಲವನ್ನು ನೀಡಿದೆ. ಪ್ರಯಾಣದ ಭಾಗವಾಗಿರುವ, ನನ್ನನ್ನು ಬೆಂಬಲಿಸಿದ ಮತ್ತು ನಾನು ಇಂದು ಇರುವ ಸ್ಥಿತಿಯನ್ನು ತಲುಪಲು ಸಹಾಯ ಮಾಡಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಂದು, ನಾನು ಏನನ್ನಾದರೂ ಪ್ರಾರಂಭಿಸಲು ಯೋಜಿಸುತ್ತಿದ್ದೇನೆ, ಅದು ಬಹುಶಃ ಬಹಳಷ್ಟು ಜನರಿಗೆ ಸಹಾಯ ಮಾಡುತ್ತದೆ. ನಾನು ನನ್ನ ಜೀವನದ ಈ ಅಧ್ಯಾಯವನ್ನು ಪ್ರವೇಶಿಸುವಾಗ ನಿಮ್ಮ ಬೆಂಬಲವನ್ನು ನೀವು ಮುಂದುವರಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಗಂಗೂಲಿ ಟ್ವಿಟರ್‌ನಲ್ಲಿ ಹೇಳಿದ್ದರು.

JOB ALERT : ‘PUC’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : 1591 ಕಾನ್ಸ್​ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | Karnataka State Police  

BREAKING NEWS : ಪ್ರಧಾನಿ ಮೋದಿಗೆ ನಿಂದನೆ ಆರೋಪ : ಗುಜರಾತ್ AAP ಅಧ್ಯಕ್ಷ ‘ಗೋಪಾಲ್ ಇಟಾಲಿಯಾ’ ಬಂಧನಗೊಂಡ 3 ಗಂಟೆ ಬಳಿಕ ಬಿಡುಗಡೆ |Gopal Italiya Released

Share.
Exit mobile version