ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಗಂಭೀರವಾದ ಆರೋಪ ಮಾಡಿದ್ದೂ, ಈ ಒಂದು ಪೆನ್ ಡ್ರೈವ್ ಕೆಸಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಸ್ಕ್ರಿಪ್ಟ್ ರೈಟರ್ ಆಗಿದ್ದು, ಸಿದ್ದರಾಮಯ್ಯ ಡೈರೆಕ್ಷನ್ ಹಾಗೂ ಡಿಕೆ ಶಿವಕುಮಾರ್ ಪ್ರೊಡ್ಯೂಸರ್ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಕ್ಕಲಿಗರಿಗೆ ಅವಮಾನ ಮಾಡಲು ಒಂದು ಲಕ್ಷ ಪೆನ್ ಡ್ರೈವ್ ಹಂಚಿಕೆ ಮಾಡಿದ್ದಾರೆ. ಒಂದು ಲಕ್ಷ ಪೆನ್ ಡ್ರೈವ್ ಗಳಲ್ಲಿ ವಿಡಿಯೋ ಹಾಕಿ ಹಂಚಿದ್ದಾರೆ. ಲಿಂಗಾಯತರಿಗೆ ಅವಮಾನ ಮಾಡಿದ್ರು ಈಗ ಒಕ್ಕಲಿಗರಿಗೆ ಅಪಮಾನ ಮಾಡುತ್ತಿದ್ದಾರೆ ಎಂದರು.

ಎಸ್ಐಟಿ ಸಿದ್ದರಾಮಯ್ಯ ಮತ್ತು ಡಿಕೆ ಪರ ರಬ್ಬರ್ ಸ್ಟ್ಯಾಂಪ್ ಆಗಿದೆ. ದಾಖಲೆಗಳನ್ನು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಸಿಎಂ ರಹಸ್ಯ ಸಭೆ ಮಾಡಿ ಸಂಚು ಮಾಡಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಹೋಗುವುದರಲ್ಲೂ ಕಾಂಗ್ರೆಸ್ ಕುತಂತ್ರ ಇದೆ. ಇದರ ಹಿಂದೆ ತ್ರಿಬಲ್ ಎಕ್ಸ್ ಗಳ ಕೈವಾಡವಿದೆ ಇವರದ್ದು ತ್ರಿಬಲ್ SSSSIT ಅಂದರೆ ಸುರ್ಜೆವಾಲಾ, ಸಿದ್ದರಾಮಯ್ಯ, ಶಿವಕುಮಾರ್ ಅಂತ ಅರ್ಥ ಎಂದರು.

ವಿಡಿಯೋ ಇಟ್ಟುಕೊಂಡರೆ ಹಂಚಿದರೆ ಅಪರಾಧ ಎಂದು ಎಚ್ಚರಿಕೆ ವಿಚಾರವಾಗಿ ನಾನೇ ವಿಡಿಯೋ ಕೊಟ್ಟಿದ್ದು ಅಂತ ಕಾರ್ತಿಕ್ ಗೌಡ ಈಗಾಗಲೇ ತಿಳಿಸಿದ್ದಾನೆ.ಕಾರ್ತಿಕ ಗೌಡ ವಿದೇಶದಲ್ಲಿದ್ದಾನೆ ವಾಸಕ್ಕೆ ಕೋಟಿ ಖರ್ಚಾಗುತ್ತದೆ.ಇದಕ್ಕೆ ಕಾಂಗ್ರೆಸ್ ಸ್ಪೋನ್ಸರ್ ಮಾಡಿದೆ ಎಸ್ಐಟಿಗೆ ಸ್ವಲ್ಪವೂ ಗೌರವ ಇಲ್ಲ ಗೌರವ ಇದ್ದಿದ್ದರೆ ಅರ್ಜಿ ಹಾಕಲಿ ಸಿಬಿಐ ತನಿಖೆಗೆ ಎಸ್ಐಟಿ ಅರ್ಜಿ ಹಾಕಲಿ ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು.

ಇದರ ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಸ್ಕ್ರಿಪ್ಟ್ ರೈಟರ್, ಡೈರೆಕ್ಷನ್ ಸಿದ್ರಾಮಯ್ಯ ಮಾಡಿದ್ದಾರೆ ಪ್ರೊಡ್ಯೂಸರ್ ಡಿಸಿಎಂ ಡಿಕೆ ಎಂದು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.

Share.
Exit mobile version