Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

SHOCKING : `ವಕ್ಫ್ ಆಸ್ತಿ’ ಅತಿಕ್ರಮಣ ವಿರುದ್ಧ ಹೋರಾಡುತ್ತಿದ್ದ ವಕೀಲನಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ ಹತ್ಯೆ | WATCH VIDEO

BIG UPDATE : ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ ಪ್ರೆಸ್ ರೈಲು ಗುರಿಯಾಗಿಸಿ ಆತ್ಮಾಹುತಿ ಬಾಂಬ್ ದಾಳಿ : 30 ಜನ ಸಾವು.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : `ವಕ್ಫ್ ಆಸ್ತಿ’ ಅತಿಕ್ರಮಣ ವಿರುದ್ಧ ಹೋರಾಡುತ್ತಿದ್ದ ವಕೀಲನಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ ಹತ್ಯೆ | WATCH VIDEO
INDIA

SHOCKING : `ವಕ್ಫ್ ಆಸ್ತಿ’ ಅತಿಕ್ರಮಣ ವಿರುದ್ಧ ಹೋರಾಡುತ್ತಿದ್ದ ವಕೀಲನಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ ಹತ್ಯೆ | WATCH VIDEO

By kannadanewsnow57

ಹೈದರಾಬಾದ್: ವಕ್ಫ್ ಆಸ್ತಿಗಳ ಅತಿಕ್ರಮಣದ ವಿರುದ್ಧ ನಿರಂತರವಾಗಿ ಕಾನೂನು ಹೋರಾಟ ನಡೆಸುತ್ತಿದ್ದ ಹೈದರಾಬಾದ್ನ ಹಿರಿಯ ವಕೀಲರೊಬ್ಬರನ್ನು ಶನಿವಾರ ಬೆಳಗಿನ ಜಾವ ಅವರ ಮನೆಯ ಹೊರಗಡೆಯೇ ಸ್ಕಾರ್ಪಿಯೋ ಕಾರಿನಿಂದ ಡಿಕ್ಕಿ ಹೊಡೆಸಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಖಾಜಾ ಮೊಯಿಜುದ್ದೀನ್ (63) ಕೊಲೆಯಾದ ದುರ್ದೈವಿ ವಕೀಲರು. ಶಾಂತಿ ನಗರದಲ್ಲಿರುವ ಅವರ ನಿವಾಸದ ಬಳಿಯೇ ಈ ಘಟನೆ ನಡೆದಿದ್ದು, ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

ಘಟನೆ ಹಿನ್ನೆಲೆ:

ಶನಿವಾರ ಬೆಳಿಗ್ಗೆ ಸುಮಾರು 5.30 ರ ಸುಮಾರಿಗೆ ವಕೀಲ ಖಾಜಾ ಮೊಯಿಜುದ್ದೀನ್ ಅವರು ಈಜು ತರಬೇತಿಗೆಂದು ಮನೆಯಿಂದ ಹೊರಟಿದ್ದರು. ಅವರು ತಮ್ಮ ಕಾರನ್ನು ಹತ್ತಲು ಮುಂದಾದಾಗ, ಹಿಂದಿನಿಂದ ಅತಿ ವೇಗವಾಗಿ ಬಂದ ಹಸಿರು ಬಣ್ಣದ ಸ್ಕಾರ್ಪಿಯೋ ಎಸ್ಯುವಿ (SUV) ಕಾರು ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೊಯಿಜುದ್ದೀನ್ ಅವರು ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾರೆ. ಕೃತ್ಯ ಎಸಗಿದ ತಕ್ಷಣ ದುಷ್ಕರ್ಮಿಗಳು ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮೊಯಿಜುದ್ದೀನ್ ಅವರನ್ನು ತಕ್ಷಣವೇ ಮಹಾವೀರ್ ಆಸ್ಪತ್ರೆಗೆ, ತದನಂತರ ಅಬಿಡ್ಸ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 12.30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.

ಮೃತರ ಮಗ ಹಾಗೂ ವಕೀಲರೂ ಆಗಿರುವ ಮೊಹಮ್ಮದ್ ಫರ್ಹಾನ್ ಅವರು ಈ ಹತ್ಯೆಯ ಹಿಂದೆ ನಗರದ ಇಬ್ಬರು ಪ್ರಮುಖ ಶಿಕ್ಷಣ ತಜ್ಞರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ತೀವ್ರ ಕಾನೂನು ವಿವಾದವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದಕ್ಕೂ ಮೊದಲು ಗನ್ಫೌಂಡ್ರಿಯಲ್ಲಿರುವ ಅವರ ಕಚೇರಿ ಮೇಲೆ ದಾಳಿಯಾಗಿತ್ತು. ಮೂರು ವರ್ಷಗಳ ಹಿಂದೆ ನಮ್ಮ ಮನೆಯ ಬಳಿಯ ಮಸೀದಿ ಹತ್ತಿರವೂ ಇದೇ ರೀತಿ ಗಾಡಿಯಿಂದ ಡಿಕ್ಕಿ ಹೊಡೆಸುವ ಪ್ರಯತ್ನ ನಡೆದಿತ್ತು. ಕೇಸ್ ಹಿಂಪಡೆಯಲು ಬೆದರಿಕೆ ಕರೆಗಳು, ಹಣದ ಆಮಿಷಗಳು ಬರುತ್ತಿದ್ದವು. ಆರು ತಿಂಗಳ ಹಿಂದೆ ನನಗೂ ಕೂಡ ಬೆದರಿಕೆ ಹಾಕಲಾಗಿತ್ತು,” ಎಂದು ಮಗ ಫರ್ಹಾನ್ ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಿಕಂದರಾಬಾದ್ ಡಿಸಿಪಿ ರಕ್ಷಿತಾ ಕೃಷ್ಣ ಮೂರ್ತಿ ಅವರು ಪ್ರತಿಕ್ರಿಯಿಸಿದ್ದು, “ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಈಗಾಗಲೇ 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಸೆರೆಹಿಡಿಯಲಾಗುವುದು,” ಎಂದು ತಿಳಿಸಿದ್ದಾರೆ.

Hyderabad: Senior advocate Khaja Moizuddin died after a suspected hit-and-run.

Adv Khaja was fighting legal battle against illegal occupation and privatisation of waqf properties.

Son alleges that the attack may be linked to his long legal battle against Waqf Mafias… pic.twitter.com/37YGfH0qCP

— Rupsy Saini (@ZiviiBloom) May 23, 2026

SHOCKING: Lawyer fighting against encroachment on `Wakf property' killed after being hit by Scorpio | WATCH VIDEO
Share. Facebook Twitter LinkedIn WhatsApp Email

Related Posts

100 ಮೀಟರ್ ಓಟ : 10.09 ಸೆಕೆಂಡುಗಳಲ್ಲಿ ಗುರಿ ತಲುಪಿ ಇತಿಹಾಸ ಬರೆದ ಗುರಿಂದರ್ ವೀರ್ ಸಿಂಗ್ | WATCH VIDEO

2 Mins Read

JOB ALERT : ಭಾರತೀಯ ರೈಲ್ವೇ ಇಲಾಖೆಯಲ್ಲಿ 6,500ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Railway Recruitment-2026

2 Mins Read

BREAKING : ಪಂಜಾಬ್ ನಲ್ಲಿ ಗುಂಡಿಕ್ಕಿ `ASI’ ಜೋಗಿಂದರ್ ಸಿಂಗ್ ಬರ್ಬರ ಹತ್ಯೆ

1 Min Read
Recent News

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

SHOCKING : `ವಕ್ಫ್ ಆಸ್ತಿ’ ಅತಿಕ್ರಮಣ ವಿರುದ್ಧ ಹೋರಾಡುತ್ತಿದ್ದ ವಕೀಲನಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ ಹತ್ಯೆ | WATCH VIDEO

BIG UPDATE : ಪಾಕಿಸ್ತಾನದಲ್ಲಿ ಜಾಫರ್ ಎಕ್ಸ್‌ ಪ್ರೆಸ್ ರೈಲು ಗುರಿಯಾಗಿಸಿ ಆತ್ಮಾಹುತಿ ಬಾಂಬ್ ದಾಳಿ : 30 ಜನ ಸಾವು.!

BREAKING : ಕಲಬುರ್ಗಿಯಲ್ಲಿ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ : ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

State News
KARNATAKA

ಸಾಲಗಾರನಿಗೆ ಹೆದರಿಸಲು ತಂದಿದ್ದ ಲಾಂಗ್‌ಗೆ ಬಲಿಯಾದ ನಿರಪರಾಧಿ ಯುವಕ! ಮೂವರು ಅರೆಸ್ಟ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಮಂಡ್ಯ: ಸ್ಕೇಚ್ ಹಾಕಿದ್ದು ಸಾಲ ಕೊಟ್ಟವನಿಗೆ, ಆದರೆ ಕುಡಿದ ಮತ್ತಿನಲ್ಲಿ ನಡೆದ ಸಣ್ಣ ಜಗಳಕ್ಕೆ ಬಲಿಯಾಗಿದ್ದು ಮಾತ್ರ ಮತ್ಯಾರೋ ನಿರಪರಾಧಿ!…

BREAKING : ಕಲಬುರ್ಗಿಯಲ್ಲಿ ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ : ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಪಹಣಿ (RTC) ತಿದ್ದುಪಡಿ ಪ್ರಕ್ರಿಯೆ ಸಂಪೂರ್ಣ ಆನ್ ಲೈನ್.!

BIG NEWS : ಮಂಗಳೂರು-ಬೆಂಗಳೂರು ಜನತೆಗೆ ಗುಡ್ ನ್ಯೂಸ್ : ವಂದೇ ಭಾರತ್ ಎಕ್ಸ್​ಪ್ರೆಸ್ ಜೂನ್​ನಲ್ಲಿ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.