ಚಿಕ್ಕಬಳ್ಳಾಪುರ: ಇಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ( Minister Dr K Sudhakar ) ಅವರೇ ಬೆಚ್ಚಿಬೀಳಿಸುವಂತ ಘಟನೆ ನಡೆದಿದೆ. ಸಚಿವರ ಸುತ್ತಾ ಮುತ್ತಾ ಶರ್ಟ್ ನಲ್ಲಿ ಡ್ಯಾಗರ್ ಇಟ್ಟುಕೊಂಡು ಓಡಾಡುತ್ತಿದ್ದಂತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Breaking News: ಇಂದಿನಿಂದ ಆ.1ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯ ಈ ತಾಲೂಕುಗಳಲ್ಲಿ ‘ಮದ್ಯ ಮಾರಾಟ’ ನಿಷೇಧಿಸಿ ಡಿಸಿ ಆದೇಶ

ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಾರ್ಯಕ್ರಮವೊಂದರ ಬಳಿಕ ಅಲ್ಲಿದ್ದಂತ ಜನರೊಂದಿಗೆ ಸಚಿವ ಡಾ.ಕೆ ಸುಧಾಕರ್ ಅವರು ಮಾತನಾಡುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಚಿವರ ಹಿಂದೆ ಮುಂದೆ, ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು.

Breaking news:‌ ಮಾಸ್ಕೋದಲ್ಲಿ 15 ಅಂತಸ್ತಿನ ಕಟ್ಟಡದಲ್ಲಿ ಭಾರೀ ಬೆಂಕಿ ಅವಘಡ: 8 ಮಂದಿ ಸಾವು, ಹಲವರ ರಕ್ಷಣೆ

ಗುಡಿಬಂಡೆ ಪೊಲೀಸರು ಆತನ ಬಗ್ಗೆ ಅನುಮಾನಗೊಂಡು ಬಂಧಿಸಿ, ಪರಿಶೀಲನೆ ನಡೆಸಿದಾಗ ಶರ್ಟ್ ನಲ್ಲಿ ಡ್ಯಾಗರ್ ಇಟ್ಟುಕೊಂಡಿದ್ದು ಪತ್ತೆಯಾಗಿದೆ. ಇದೀಗ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share.
Exit mobile version