ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಗ್ರಾಮಾಂತರ ಠಾಣೆಯ ಪೊಲೀಸರು ಅಡಿಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಂತ ಮೂವರು ಅಂತರರಾಜ್ಯ ಅಡಿಕೆ ಕಳ್ಳರನ್ನು ಬಂಧಿಸಿದ್ದಾರೆ. ಅಲ್ಲದೇ ಅವರಿಂದ 1.42 ಕೋಟಿ ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಹಂಚಿಕೊಂಡಿದ್ದು, ಠಾಣೆಯ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ರವರ ಗೋಡಾನ್ ನಿಂದ ದೋಲರಾಮ್ ತಂದೆ ಹರಿಸಿಂಗ್ ರವರಿಗೆ ಸೇರಿದ 24,500 ಕೆಜಿ ತೂಕದ 350 ಚೀಲ ಕೆಂಪು ಅಡಿಕೆಯನ್ನು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಲೋಡ್ ಕಳುಹಿಸಿದ್ದು, ಆರೋಪಿಗಳು ಲೋಡ್ ಅನ್ನು ಅಹಮದಾಬಾದ್ ತೆಗೆದುಕೊಂಡು ಹೋಗದೆ ಮೋಸ ಮಾಡಿದ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 356/2022 ಕಲಂ 420, 468 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕೃಷಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕುಗಳಿಂದ ಉತ್ತಮ ಸಾಧನೆ – ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘನೆ

ಪ್ರಕರಣದ ಆರೋಪಿಗಳ ಪತ್ತೆಗಾಗಿ ರೋಹನ್ ಜಗದೀಶ್ ಐ.ಪಿ.ಎಸ್ ಪೊಲೀಸ್ ಸಹಾಯಕ ಅಧಿಕ್ಷಕರು ಸಾಗರ ಉಪವಿಭಾಗರವರ ಮೇಲುಸ್ತುವಾರಿಯಲ್ಲಿ ವಿ. ಪ್ರವೀಣ್ ಕುಮಾರ್, ಪೊಲೀಸ್ ನಿರೀಕ್ಷಕರು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ತಿರುಮಲೇಶ್ ನಾಯ್ಕ, ಪೊಲೀಸ್ ಉಪ ನಿರೀಕ್ಷಕರು ಕಾರ್ಗಲ್ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂಧಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ಮಹರಾಷ್ಟ್ರ ರಾಜ್ಯದ ಕೊಲ್ಹಾಪುರ, ಸೊಲ್ಹಾಪುರ, ಪುಣೆ, ಮುಂಬೈ, ದುಲೆ, ಗುಜರಾಜ್ ರಾಜ್ಯದ ಸುರತ್, ಅಹ್ಮದಾಬಾದ್, ವಡೋದರಾ, ಮಧ್ಯಪ್ರದೇಶ ರಾಜ್ಯದ ಇಂದೋರ, ಖಜ್ರಾನಾ, ಉಜ್ಜೆನಿ, ರಾಜಘಡ್ ಗಳಲ್ಲಿ ಸುಮಾರು 22 ದಿನಗಳ ಕಾರ್ಯಾಚರಣೆ ನಡೆಸಿಲಾಗಿದೆ ಎಂದಿದ್ದಾರೆ.

ದಿನಾಂಕ:18-11-2022 ರಂದು ಆರೋಪಿಗಳಾದ 1) ರಜಾಕ್ ಖಾನ್ @ ಸಲೀಂ ಖಾನ್ ತಂದೆ ಇಮಾಮ್ ಖಾನ್, 65 ವರ್ಷ, ಲಾರಿ ಚಾಲಕ ಕೆಲಸ, ವಾಸ ನ್ಯೂ ದಾವುದಿ ಎಸ್.ಆರ್.ಕೆ ಜಿಮ್ ಹತ್ತಿರ ಖಜ್ರಾನ್, ಇಂದೋರ್ ಜಿಲ್ಲೆ. ಸ್ವಂತ ವಿಳಾಸ ಜ್ಯೂತಿ ನಗರ, ಸಹಜಾಪುರ ತಾಲ್ಲೂಕು, ಮತ್ತು ಜಿಲ್ಲೆ. ಮಧ್ಯಪ್ರದೇಶ ರಾಜ್ಯ. 2) ಥೇಜು ಸಿಂಗ್ ತಂದೆ ಕಚರು ಸಿಂಗ್, 42 ವರ್ಷ, ಲಾರಿ ಚಾಲಕ ಕೆಲಸ, ವಾಸ ಮಾಲತಿ ರೋಡ್ ಸರ್ಕಲ್, ಘಾಟಬಿಲೋದ್, ಘಾಟಬಿಲೋದ್ ತಾಲ್ಲೂಕು ಮತ್ತು ಜಿಲ್ಲೆ. ಮಧ್ಯಪ್ರದೇಶ ರಾಜ್ಯ. ಸ್ವಂತ ಊರು ವಡವ್ ಸರ್ಕಲ್, ವಡವ್ ಏರಿಯಾ, ಆಶ್ರಯ ಬಡಾವಣೆ, ಅಹಮದಾಬಾದ್.ಗುಜರಾತ ರಾಜ್ಯ. 3) ಅನೀಸ್ ಅಬ್ಬಾಸಿ ತಂದೆ ಖಾಲೆಖಾ, 55 ವರ್ಷ, ಚಾಲಕ ವೃತ್ತಿ, ವಾಸ ವಜೀದ್‌ಪುರ ಮೊಹಲ್ಲಾ, ದಾನಮಂಡಿ ಹತ್ತಿರ ಶಹಜಾಪುರ ತಾಲ್ಲೂಕು ಮತ್ತು ಜಿಲ್ಲೆ. ಮಧ್ಯಪ್ರದೇಶದರವರುಗಳನ್ನು ಮದ್ಯಪ್ರದೇಶ ರಾಜ್ಯದ ಶಾಜಾಪುರ ಜಿಲ್ಲೆಯ ಶಾಜಾಪುರ ಟೌನ್ ಬೈಪಾಸ್ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಬಾಲಾಜಿ ಡಾಬಾ ಎದುರು ವಶಕ್ಕೆ ಪಡೆದು ಕೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

BIG NEWS: ಕರಾವಳಿಯಲ್ಲಿ ಮತ್ತೆ ‘ಧರ್ಮ ದಂಗಲ್’: ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಅನ್ಯಮತೀಯರ ವ್ಯಾಪರಕ್ಕೆ ಬ್ರೇಕ್

ಈ ಪ್ರಕರಣದಲ್ಲಿ ಮಧುಕರ್ ನಿವಾಸದಿಂದ ಕದ್ದಿರುವಂತ 350 ಚೀಲದಲ್ಲಿದ್ದ ರೂ 1,17,60,000/- ಮೌಲ್ಯದ 24,500 ಕೆಜಿ ತೂಕದ ಕೆಂಪು ಅಡಿಕೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ 25 ಲಕ್ಷ ರೂ ಮೌಲ್ಯದ ಅಶೋಕ ಲೈಲ್ಯಾಂಡ್ ಲಾರಿ ಸೇರಿದಂತೆ ಒಟ್ಟು ರೂ 1,42,60,000/- ಮೌಲ್ಯದ ಮಾಲನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಉತ್ತಮ ಕಾರ್ಯ ಮಾಡಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ವಿ ಪ್ರವೀಣ್ ಕುಮಾರ್, ಕಾರ್ಗಲ್ ಪೊಲೀಸ್ ಠಾಣೆಯ ಉಪ ನಿರೀಕ್ಷಕ ತಿರುಮಲೇಶ್ ನಾಯಕ್, ಸಾಗರ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದಂತ ಸನಾವುಲ್ಲಾ, ಶ್ರೀಧರ್, ತಾರನಾಥ್, ರವಿಕುಮಾರ್, ಹನುಮಂತಪ್ಪ ಜಂಬೂರ, ಪ್ರವೀಣ್ ಕುಮಾರ್ ಅವರುಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘಿಸಿ, ನಗದು ಬಹುಮಾನ, ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.

ವರದಿ: ಉಮೇಶ್ ಮೊಗವೀರ, ಸಾಗರ

Share.
Exit mobile version