ದೆಹಲಿ: ಉತ್ತರ ಪ್ರದೇಶದ ಸಹರಾನ್​​ಪುರ್​​ದಲ್ಲಿ ಕಬಡ್ಡಿ ಕ್ರೀಡಾಪಟುಗಳು ಶೌಚಾಲಯದಲ್ಲಿ ಆಹಾರ ಸೇವಿಸಿದ ವಿಡಿಯೋವೊಂದು ಕೆಲದಿನಗಳ ಹಿಂದೆ ವೈರಲ್​ ಆಗಿತ್ತು. ಈ ವಿಚಾರವಾಗಿ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಕ್ರಿಕೆಟರ್​​ ಶಿಖರ್​ ಧವನ್​​(Shikhar Dhawan) ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುಪಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ʻರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕಬಡ್ಡಿ ಆಟಗಾರರು ಶೌಚಾಲಯದಲ್ಲಿ ಆಹಾರ ಸೇವಿಸುವುದನ್ನು ನೋಡಿ ತುಂಬಾ ಬೇಸರವಾಗಿದೆ. ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆʼ ಎಂದು ಧವನ್ ಟ್ವೀಟ್ ಮಾಡಿದ್ದಾರೆ.

ವೈರಲ್‌ ಆಗಿದ್ದ ವಿಡಿಯೋದಲ್ಲಿ, ʻ 16 ವರ್ಷದೊಳಗಿನವರ ಈವೆಂಟ್‌ನಲ್ಲಿ ಸ್ಪರ್ಧಿಸುವ ಕಬಡ್ಡಿ ಆಟಗಾರರು ಶೌಚಾಲಯದಲ್ಲಿ ಇರಿಸಲಾಗಿದ್ದ ಅನ್ನ, ಸಾಂಬಾರ್‌, ಪೂರಿಯನ್ನು ಬಡಿಸಿಕೊಂಡು ಊಟ ಮಾಡುತ್ತಿರುವುದನ್ನು ನೋಡಬಹುದು.

BIGG BREAKING NEWS : `PAYCM’ ಪೋಸ್ಟರ್ ಅಂಟಿಸಿದ ಕೇಸ್ : ಮೂವರನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು

BIGG NEWS: 2002ರ ಗಲಭೆಯಲ್ಲಿ ನರೇಂದ್ರ ಮೋದಿಗೆ ಮರಣದಂಡನೆ ಶಿಕ್ಷೆ ವಿಧಿಸಲು ತೀಸ್ತಾ ಸೆಟಲ್ವಾಡ್ ಸಂಚು ರೂಪಿಸಿದ್ದರು: SIT ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

BIGG NEWS : ಸಿಲಿಕಾನ್‌ ಸಿಟಿ ಜನರೇ ಎಚ್ಚರ..! BMTC ಬಸ್ಸಿನಲ್ಲಿ ಲೇಡಿಸ್ ಸೀಟ್‍ನಲ್ಲಿ ಕೂತು ಪ್ರಯಾಣಿಸಿದ್ರೆ ಬೀಳುತ್ತೆ ದುಬಾರಿ ದಂಡ | Ladies Seat

Share.
Exit mobile version