ಶಿವಮೊಗ್ಗ: ಜಿಲ್ಲೆಯಲ್ಲಿ ಸಾಗರದ ಪ್ರವಾಸಿ ಮಂದಿರದ ಬಳಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್‌ ಆರ್‌ ಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪ್ರತಿಕ ವಿತರಕ ಸಾವನ್ನಪ್ಪಿದ್ದಾನೆ. ಅವಘಡದಿಂದ ಹಿಂಬದಿ ಸವಾರಿಗೆ ಗಂಭೀರ ಗಾಯಗೊಂಡಿದೆ.

BIGG NEWS: ಪ್ರಯಾಣಿಕರಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಕಾಣಿಸಿಕೊಂಡಿದ್ದ ಹೊಗೆ; ದೆಹಲಿಗೆ ವಾಪಸ್‌ ಆದ ಫ್ಲೈಟ್‌| SpiceJet flight

25 ವರ್ಷದ ಬೆಳಲಮಕ್ಕಿಯ ಗಣೇಶ್‌ ಎಂಬಾತ ಸಾವನ್ನಪ್ಪಿರುವ ಯುವಕ. ಬೆಂಗಳೂರಿನಿಂದ ಸಾಗರ ಮಾರ್ಗವಾಗಿ ಯಲ್ಲಾಪುರಕ್ಕೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಸೈಕಲ್‌ ನಲ್ಲಿ ಹೊರಟಿದ್ದ ಯವಕನಿಗೆ ಡಿಕ್ಕಿ ಆಗಿದೆ. ಘಟನೆಯಲ್ಲಿ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸೈಕಲ್ ಹಿಂಬದಿ ಸವಾರ ರಾಹುಲ್ ಗಾಯಗೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Share.
Exit mobile version