ಕೊಪ್ಪಳ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯ ಅಬ್ಬರ ಜೋರಾಗಿದೆ. ಇದರಿಂದಾಗಿ ಜಿಲ್ಲೆಯ ಗಂಗಾವತಿಯ ದೇವಘಾಟ ಗ್ರಾಮದಲ್ಲಿ 120 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಒಂದು ವಾರದಿಂದ ನಡುಗಡ್ಡೆಯಲ್ಲಿ ಸಿಲುಕಿರುವ 120 ಕುರಿಗಳು ಸಿಲುಕಿಗೊಂಡಿದೆ.

BIGG BREAKING NEWS: ‘ತಾಜ್ ಬಾಬಾ’ ಎಂದೇ ಖ್ಯಾತರಾಗಿದ್ದ ಕಲಬುರಗಿಯ ಸೂಫಿ ಸಂತ ‘ಶೇಖ್  ತಾಜುದ್ದೀನ್ ಜುನೈದಿ’ ಇನ್ನಿಲ್ಲ

 

ತುಂಗಭದ್ರಾ ನದಿ ಪ್ರವಾಹಕ್ಕೆ ದೇವಘಾಟ ಬಳಿ ನಡುಗಡ್ಡೆ ಉಂಟಾಗಿದ್ದು, ನಿನ್ನೆ ಅಗ್ನಿಶಾಮಕದಳದವರಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಇಂದು ವಿಜಯವಾಡದಿಂದ ಎನ್​ಡಿಆರ್​ಎಫ್​ ತಂಡ ಆಗಮಿಸಿದ್ದು, ಇಬ್ಬರು ಕುರಿಗಾಹಿಗಳು,120 ಕುರಿಗಳ ರಕ್ಷಣೆಗೆ ತಂಡ ಮುಂದಾಗಿದೆ. ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ್ದು, ಗ್ರಾಮಗಳಲ್ಲಿ ಜಮೀನುಗಳು ಜಲಾವೃತವಾಗಿವೆ.ಇಂದರಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ.

Share.
Exit mobile version