ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹತ್ಯೆಯಾದ ಬಳಿಕ ಸ್ಥಳದಲ್ಲಿದ್ದ ನಿಗೂಢ ವ್ಯಕ್ತಿ ಇದೀಗ ಪತ್ತೆಯಾಗಿದ್ದಾನೆ. ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದ ಕಾಣದ ವ್ಯಕ್ತಿ ಇದೀಗ ಪತ್ತೆಯಾಗಿದ್ದಾನೆ ಎನ್ನಲಾಗುತ್ತಿದೆ.ಪತ್ತೆಯಾದ ವ್ಯಕ್ತಿಯನ್ನು MLA ರವಿ ಸುಬ್ರಮಣ್ಯ ಕಾರು ಚಾಲಕ ಕಾರ್ತಿಕ್ ಪುರೋಹಿತ ಎಂದು ತಿಳಿದುಬಂದಿದೆ.

ಪ್ರದೋಷ ಸೂಚನೆ ಮೇರೆಗೆ ಕಾರ್ತಿಕ್ ಪುರೋಹಿತ್ ಸ್ಪಾಟ್ ಗೆ ಬಂದಿದ್ದ ಕೊಲೆ ಸ್ಥಳದಿಂದ ಪ್ರದರ್ಶನನ್ನು ಕಾರ್ತಿಕ್ ಪುರೋಹಿತ್ ಕಾರಲ್ಲಿ ಕರೆದು ಸದ್ಯ ಅಪ್ಪು ಕಾರ್ತಿಕ್ರಿಯ ಪೊಲೀಸರು ನೋಟಿಸಿದ್ದಾರೆ ನೋಟಿಸ್ ನೀಡಿದ ನಂತರ ಕಾರ್ತಿಕ್ ಪರಾರಿಯಾಗಿದ್ದಾನೆ ಎಂಎಲ್ಎ ಬಳಿ ಕಾರ್ತಿಕ್ ಪರೋಹಿತ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಎಂಎಲ್ಎ ರವಿ ಸುಬ್ರಮಣ್ಯ ಕಚೇರಿಯಲ್ಲಿ ಇದೀಗ ನಿಗೂಢ ವ್ಯಕ್ತಿ ಕಾರ್ತಿಕ್ ಪುರೋಹಿತ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಇದೀಗ ಪೊಲೀಸರು ಕಾರ್ತಿಕ್ ಪುರೋಹಿತಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದು, ನೋಟಿಸ್ ಬಂದ ತಕ್ಷಣ ಕಾರ್ತಿಕ್ ಪುರೋಹಿತ್ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಾರ್ತಿಕ್ ಗೆ ಆರೋಪಿ ದೀಪಕ್ ಅಮೌಂಟ್ ಆಫರ್ ಮಾಡಿದ್ದ ನಿಂಗೆ 10 ಲಕ್ಷ ಕೊಡುತ್ತೇವೆ. ನಿನ್ನ ತಾಯಿಗೆ 5 ಲಕ್ಷ ಕೊಡುತ್ತೇವೆ. ಕೇಸ್ನಲ್ಲಿ ಬೆಲ್ ಮಾಡಿಸುವ ಜವಾಬ್ದಾರಿ ನಮ್ಮದು. ತಿಂಗಳಿಗೆ 3000 ಸಂಬಳ ಕೊಡುತ್ತೇವೆ.ಶೆಡ್ ನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಕಾರ್ತಿಕ್ ದೀಪಕ್ ಎಲ್ಲ ಮಾತಿಗೆ ಒಪ್ಪಿಕೊಂಡಿದ್ದ ಎನ್ನಲಾಗಿದೆ.

ಆರೋಪಿ ದೀಪಕ್ ನನ್ನು ಉಳಿಸಲು ಪ್ರಭಾವಿಗಳಿಂದ ಒತ್ತಡ ಬಂದಿದ್ದು, ಪ್ರಭಾವಿ ಶಾಸಕರ ತಂಗಿ ಮಗಳ ಗಂಡ ಆಗಿರುವಂತಹ ದೀಪಕ್ ನನ್ನು ಉಳಿಸಲು ಶಾಸಕ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ಹಾಗೂ ಶಾಸಕನಿಂದ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಪೊಲೀಸರ ಮೇಲೆ ಪ್ರಭಾವಿದ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ ಕೊಲೆ ಕೇಸ್ನಲ್ಲಿ ದೀಪಕ್ 13ನೇ ಆರೋಪಿಯಾಗಿದ್ದಾನೆ.

Share.
Exit mobile version