ಬೆಂಗಳೂರು: ಕಿರಿಕ್ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ಇದೀಗ ಪ್ರಖ್ಯಾತ ನಟಿಯಾಗಿ ರಶ್ಮಿಕಾ ಮಂದಣ್ಣ ( Rashmika Mandanna ) ಮಿಂಚುತ್ತಿದ್ದಾರೆ. ಇಂತಹ ಅವರು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ, ರಾಜಕೀಯ ರಂಗಕ್ಕೆ ಪ್ರವೇಶಿಸಲಿದ್ದಾರೆ. ಕರ್ನಾಟಕದಿಂದಲೇ ಚುನಾವಣೆಗೆ ನಿಂತು, ಸಂಸದರು ಆಗಲಿದ್ದಾರೆ ಎಂಬುದಾಗಿ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ತೆಲುಗಿನ ಖ್ಯಾತ ಜ್ಯೋತಿಷಿ ಎಂಬುದಾಗಿ ಗುರ್ತಿಸಿಕೊಂಡಿರುವಂತ ವೇಣುಸ್ವಾಮಿ ಎನ್ನುವಂತ ಜ್ಯೋತಿಷಿಯೊಬ್ಬರು, ಹೀಗೊಂದು ಸ್ಪೋಟಕ ಭವಿಷ್ಯವನ್ನು ನಟಿ ರಶ್ಮಿಕಾ ಮಂದಣ್ಣ ( Actress Rashmika Mandanna ) ಬಗ್ಗೆ ನುಡಿದಿದ್ದಾರೆ.

ಇಂದು ದೇಶದ 15ನೇ ರಾಷ್ಟ್ರಪತಿಯಾಗಿ ‘ದ್ರೌಪತಿ ಮುರ್ಮು’ ಪ್ರಮಾಣ ವಚನ ಸ್ವೀಕಾರ | Draupadi Murmu

ಯೂಟ್ಯೂಬ್ ನಲ್ಲಿನ ಸಂದರ್ಶನವೊಂದರಲ್ಲಿ ಮಾತನಾಡಿರುವಂತ ಅವರು, ರಕ್ಷಿತ್ ಶೆಟ್ಟಿಯೊಂದಿಗೆ ರಶ್ಮೀಕಾ ಮಂದಣ್ಣ ಎಂಗೇಜ್ಮೆಂಟ್ ಮಾಡಿಕೊಂಡ ಸಂದರ್ಭದಲ್ಲಿ ನಿಮ್ಮಬ್ಬಿರ ಜಾತಕದ ಪ್ರಕಾರ ಸರಿಯಿಲ್ಲ. ಈ ವಿವಾಹ ಬೇಡ ಎಂಬುದಾಗಿ ಸಲಹೆ ನೀಡಿದ್ದೆನು. ಆಗ ಅವರಿಬ್ಬರು ಬೇರೆ ಬೇರೆಯಾಗಿದ್ದರು ಎಂದರು.

ನೀವು ಈಗ ನೋಡಿದ್ದೀರಿ ರಶ್ಮೀಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್ ಆಗಿದ್ದಾರೆ. ಅವರ ಜಾತಕದ ಪ್ರಕಾರ ಅವರು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ. ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ. ಕರ್ನಾಟಕದಿಂದ ಅವರು ಚುನಾವಣೆಗೆ ನಿಂತು ನಟಿ ರಮ್ಯ ತರದಲ್ಲಿಯೇ ಸಂಸದೆಯಾಗಲಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ಈ ವಾರದಲ್ಲೇ CET-2022ರ ಫಲಿತಾಂಶ ಪ್ರಕಟ | CET-2022 Exam Results

Share.
Exit mobile version