ನವದೆಹಲಿ: ಜಿಮ್‌ ಮಾಡುವಾಗ ಹೃದಯಾಘಾತಕ್ಕೆ ಒಳಗಾಗಿದ್ದ ಬಾಲಿವುಡ್‌ ಹಾಸ್ಯನಟ ರಾಜು ಶ್ರೀವಾಸ್ತವ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದ ಬಗ್ಗೆ ಮತ್ತು ಮೆದುಳು ನಿಷ್ಕ್ರೀಯ ಹಂತಕ್ಕೆ ತಲುಪಿದೆ. ಚಿಕಿತ್ಸೆಗೂ ಅವರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ರಾಜು ಅವರ ಕುಟುಂಬ ಪ್ರತಿಕ್ರಿಯೆ ನೀಡಿದೆ.

ದೆಹಲಿಯ ಏಮ್ಸ್ ಹತ್ತಿರದ ಮೂಲಗಳ ಪ್ರಕಾರ, ರಾಜು ಶ್ರೀವಾಸ್ತವ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. “ಅವರ ಆರೋಗ್ಯದಲ್ಲಿ ಪೂರಕ ಸುಧಾರಣೆಗಾಗಿ ಅವರಿಗೆ ನೀಡಲಾಗುತ್ತಿರುವ ಕೆಲವು ಔಷಧಿಗಳನ್ನು ಸದ್ಯಕ್ಕೆ ನಿಲ್ಲಿಸಿರುವುದರಿಂದ ಅವರು ಸ್ವಲ್ಪ ಸುಧಾರಿಸಿದ್ದಾರೆ. ಆದಾಗ್ಯೂ, ಅವರು ಇನ್ನೂ ವೆಂಟಿಲೇಟರ್ನಲ್ಲಿಯೇ ಇದ್ದಾರೆ. ಅವರ ಮೆದುಳು ಚಿಕಿತ್ಸೆಗೆ ಸ್ಪಂದಿಸಿಲ್ಲ” ಎಂದು ಮೂಲಗಳು ತಿಳಿಸಿವೆ.

Share.
Exit mobile version