ಜಲಾವೃತಗೊಂಡಿದ್ದ ರಸ್ತೆ ದಾಟಲು ಯತ್ನ: ರಾಜಸ್ಥಾನದಲ್ಲಿ ನದಿಗೆ ಉರುಳಿದ ಕಾರು, ರೈಲ್ವೇ ನೌಕರ ಸಾವು

ಕೋಟಾ(ರಾಜಸ್ಥಾನ): ರಾಜಸ್ಥಾನದ ಬುಂದಿ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮುಳುಗಿದ ಸಿಲುಕಿದ ಸೇತುವೆಯ ಮೇಲೆ ರೈಲ್ವೇ ಸ್ಟೇಷನ್ ಮಾಸ್ಟರೊಬ್ಬರು ಕಾರು ಚಲಾಯಿಸಲು ಯತ್ನಿಸಿದ್ದಾರೆ. ಈ ವೇಳೆ ಕಾರು ನದಿಯಲ್ಲಿ ಕೊಚ್ಚಿಹೋದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ನಡೆದಿದೆ. ಬುಂದಿಯ ಶ್ರೀನಗರ ರೈಲ್ವೆ ನಿಲ್ದಾಣದಲ್ಲಿ ನಿಯೋಜನೆಗೊಂಡಿದ್ದ ಜೈಪುರದ ಜಂತಾ ಕಾಲೋನಿ ನಿವಾಸಿ ಮನೀಶ್ ಮೇಘವಾಲ್ ಅವರು ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಮೇಘವಾಲ್ ಅವರ ಕಾರು ನಮನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಿತಾವಾ ನದಿಗೆ ಬಿದ್ದಿದೆ. … Continue reading ಜಲಾವೃತಗೊಂಡಿದ್ದ ರಸ್ತೆ ದಾಟಲು ಯತ್ನ: ರಾಜಸ್ಥಾನದಲ್ಲಿ ನದಿಗೆ ಉರುಳಿದ ಕಾರು, ರೈಲ್ವೇ ನೌಕರ ಸಾವು