ನವದೆಹಲಿ: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಭದ್ರತೆಯನ್ನು ಬಲಪಡಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಈಗ ಸಿಆರ್ಪಿಎಫ್ ಇದಕ್ಕೆ ಸ್ಪಂದಿಸಿದೆ. ಕಾಂಗ್ರೆಸ್ ಪತ್ರಕ್ಕೆ ಪ್ರತಿಕ್ರಿಯಿಸಿದ ಅರೆಸೈನಿಕ ಪಡೆ, 2020 ರಿಂದ, ರಾಹುಲ್ ಗಾಂಧಿ ಸ್ವತಃ 113 ಬಾರಿ ಭದ್ರತಾ ಬೇಲಿಯನ್ನು ಮುರಿಯುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದೆ.

ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅವರ ಭದ್ರತೆಯಲ್ಲಿ ಸಂಪೂರ್ಣ ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ ಎಂದು ಸಿಆರ್ಪಿಎಫ್ ಹೇಳಿದೆ. ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ ಮತ್ತು ಆದರೆ ರಾಹುಲ್ ಗಾಂಧಿ ಸ್ವತಃ ಅನೇಕ ಬಾರಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಜನರನ್ನು ಭೇಟಿಯಾಗಲು ಹೊರಗೆ ಹೋಗಿದ್ದಾರೆ ಅಂತ ತಿಳಿಸಿದೆ.

Share.
Exit mobile version