ಬೆಂಗಳೂರು: ಸಿದ್ಧರಾಮೋತ್ಸವ ( Siddaramostava ) ಸಂಬಂಧ ದಾವಣಗೆರೆಯಲ್ಲಿ ನಾಳೆ ಅದ್ಧೂರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು ( Rahul Gandhi ) ಕೂಡ ಆಗಮಿಸುತ್ತಿದ್ದಾರೆ. ಇದೇ ವೇಳೆಯಲ್ಲಿ ಹುಬ್ಬಳ್ಳಿಯಲ್ಲಿ ಅವರ ನೇತೃತ್ವದಲ್ಲಿ ಇಂದು ರಾತ್ರಿ 8 ಗಂಟೆಗೆ ಸಭೆ ನಡೆಸಲು ನಿಗದಿ ಪಡಿಸಲಾಗಿತ್ತು. ಇಂತಹ ಸಭೆಯನ್ನು ದಿಢೀರ್ ರದ್ದುಪಡಿಸಲಾಗಿದೆ.

ಇನ್ನೊಬ್ಬರ ಕಣ್ಣೀರಿನ ಬಗ್ಗೆ ಇದೆಂಥಾ ವಿಕಾರ.? ಇದೇನಾ ʼಸಂಘʼ ಕಲಿಸಿದ ಸಂಸ್ಕಾರ? – ಬಿಜೆಪಿ ವಿರುದ್ಧ ಹೆಚ್.‌ಡಿ.ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್ ಮುಖಂಡ ರಾಹಲ್ ಗಾಂಧಿಯವರ ( Congress Leader Rahul Gandhi ) ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ರಾತ್ರಿ 8 ಗಂಟೆಗೆ ಕೆಪಿಸಿಸಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯನ್ನು ನಿಗದಿ ಪಡಿಸಲಾಗಿತ್ತು. ಸಿದ್ಧರಾಮೋತ್ಸವಕ್ಕೆ ಆಗಮಿಸುತ್ತಿರುವಂತ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ ಎಂದು ಹೇಳಲಾಗಿತ್ತು.

BIG BREAKING NEWS: ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ: ಆ.28ರಂದು ಭಾರತ- ಪಾಕಿಸ್ತಾನ ನಡುವೆ ಸೆಣಸಾಟ, ಸೆ.11ರಂದು ಫೈನಲ್ | Asia Cup 2022 schedule announced

ಆದ್ರೇ.. ಸಿದ್ಧರಾಮಯ್ಯ ( Siddaramaiah ) ಬಣ ಹಾಗೂ ಮೂಲಕ ಕಾಂಗ್ರೆಸ್ಸಿಗರ ನಡುವೆ ಈ ಸಭೆ ವಾಗ್ವಾದಕ್ಕೆ ಕಾರಣವಾಗುವ ಮುನ್ಸೂಚನೆಯಿಂದಾಗಿ, ಇದೀಗ ದಿಢೀರ್ ಸಭೆಯನ್ನು ರದ್ದುಗೊಳಿಸಲಾಗಿದೆ. ರಾಹುಲ್ ಗಾಂಧಿಯವರ ಸೂಚನೆಯ ಮೇರೆಗೆ ಇಂದು ರಾತ್ರಿ ನಡೆಯಬೇಕಿದ್ದಂತ ಕೆಪಿಸಿಸಿ ಸಭೆಯನ್ನು ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ.

ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಮಳೆ ಹಿನ್ನಲೆ: ಪರಿಹಾರ ಹಾಗೂ ರಕ್ಷಣಾ ಕಾರ್ಯಗಳಿಗೆ ಕ್ರಮ – CM ಬೊಮ್ಮಾಯಿ

Share.
Exit mobile version