ಕೊಚ್ಚಿ: ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ತಮ್ಮ ಲೋಕಸಭಾ ಕ್ಷೇತ್ರ ವಯನಾಡಿಗೆ ಮೂರು ದಿನಗಳ ಕಾಲ ಭೇಟಿ ನೀಡಿದ್ದಾರೆ. ಈ ನಡುವೆ ಅವರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಬಳಿಕ ತಾವು ತಂಗಿದ್ದ ಹೋಟೆಲ್ ಗೆ ವಾಪಸಾಗುತ್ತಿದ್ದ ವೇಳೆಯಲ್ಲಿ ಮೋಟಾರು ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದವರಿಗೆ ಅಪಘಾತವಾಗಿದೆ, ಇದೇ ವೇಳೇ ಅಪಘಾತಕ್ಕೆ ಈಡಾದ ಜಾಗದಲ್ಲಿ ಪ್ರಯಾಣ ಬೆಳೆಸುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ರಾಹುಲ್ ಗಾಂಧಿ ಸಹಾಯ ಮಾಡಿದ್ದಾರೆ.
ಘಟನೆ ನಂತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ರಾಹುಲ್ ಗಾಂಧಿಯವರ ಸಹಾಯದ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ರಾಹುಲ್ ಗಾಂಧಿ ಆಂಬ್ಯುಲೆನ್ಸ್ನಿಂದ ಚಕ್ರದ ಸ್ಟ್ರೆಚರ್ ಅನ್ನು ತರಲು ಮತ್ತು ವ್ಯಕ್ತಿಯನ್ನು ವಾಹನಕ್ಕೆ ಸ್ಥಳಾಂತರಿಸಲು ಸಹಾಯ ಮಾಡುತ್ತಿರುವುದನ್ನು ಕಾಣಬಹುದು.
It is @RahulGandhi who has compassion and sacrifice in his veins and the Nation's service in his heart ❤️ pic.twitter.com/TCbKtB22Zq
— Srinivas BV (@srinivasiyc) July 2, 2022