ಪಂಜಾಬ್:‌ ಆರು ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ

ಲೂಧಿಯಾನ: ಪಂಜಾಬ್‌ನ ಲೂಧಿಯಾನ ಜಿಲ್ಲೆಯಲ್ಲಿ ಆರು ವರ್ಷದ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತ ಬಾಲಕನನ್ನು ಇಶಾರ್ ನಗರದ ನಿವಾಸಿ ದಕ್ಷ್ ಗಿರಿ (6) ಎಂದು ಗುರುತಿಸಲಾಗಿದೆ. ಇಲ್ಲಿನ ಗಿಲ್ ಕೆನಾಲ್ ಸೇತುವೆಯ ಬಳಿ ಮಂಗಳವಾರ ದಕ್ಷ್ ಗಿರಿ ತನ್ನ ಕುಟುಂಬದೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನಿಷೇಧಿತ ಗಾಳಿಪಟದ ದಾರ ಆತನ ಕುತ್ತಿಗೆ ಸೀಳಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಾಲಕನ ಸಾವಿಗೆ ಕಾರಣವಾದ ಅಪರಿಚಿತ ಆರೋಪಿಗಳ … Continue reading ಪಂಜಾಬ್:‌ ಆರು ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ