ಚಿತ್ರದುರ್ಗ: ನಗರದಲ್ಲಿನ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ಸಂಬಂಧ, ಆರೋಪ ಮಾಡಿದಂತ ವಿದ್ಯಾರ್ಥಿನಿಯರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಇದೀಗ ವಿಚಾರಣೆ ಅಂತ್ಯಗೊಂಡಿದ್ದು, ಅವರನ್ನು ಆ್ಯಂಬುಲೆನ್ಸ್ ನಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. 

ರುಪ್ಸಾ ಕಮೀಷನ್ ಆರೋಪದ ಬಗ್ಗೆ ಯಾರಿಗಾದ್ರು ದೂರು ಕೊಟ್ಟಿದ್ಯಾ.? – ಸಚಿವ ಬಿ.ಸಿ ನಾಗೇಶ್ ಪ್ರಶ್ನೆ

ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶಿವಶರಣರ ವಿರುದ್ಧ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಕಳೆದ ಶುಕ್ರವಾರದಂದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ನಿನ್ನೆ ಈ ಪ್ರಕರಣವನ್ನು ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

BREAKING NEWS: ‘ಕಾಂಗ್ರೆಸ್ ಹೊಸ ಅಧ್ಯಕ್ಷ’ರ ಆಯ್ಕೆಗಾಗಿ ಚುನಾವಣೆಗೆ ಮುಹೂರ್ತ ಫಿಕ್ಸ್: ಅ.17ರಂದು ಮತದಾನ, ಅ.19ಕ್ಕೆ ಮತಏಣಿಕೆ | Congress presidential election

ಇದೀಗ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಬಳಿಕ, ಬಾಲಕಿಯರನ್ನು ಬಾಲ ಮಂದಿರಲ್ಲಿ ವಿಚಾರಣೆಗೆ ಪ್ರಕರಣ ಸಂಬಂಧ ಒಳಪಡಿಸಲಾಗಿತ್ತು. ಬಾಲಕಿಯರ ವಿಚಾರಣೆಯ ಬಳಿಕ, ಆಂಬುಲೆನ್ಸ್ ನಲ್ಲಿ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು, ಅಧಿಕಾರಿಗಳು ಕರೆದೊಯ್ದಿದ್ದಾರೆ.

Share.
Exit mobile version