ನವದೆಹಲಿ: ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ 600 ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು (ಪಿಎಂಕೆಎಸ್ಕೆ) ಉದ್ಘಾಟಿಸಿದರು. ಅವರು ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ – ಒಂದು ರಾಷ್ಟ್ರ ಒಂದು ರಸಗೊಬ್ಬರವನ್ನು ಪ್ರಾರಂಭಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಮಂತ್ರಿಯವರು, ಇಂದು 600ಕ್ಕೂ ಹೆಚ್ಚು ಪ್ರದಾನ ಮಂತ್ರಿ ಸಮೃದ್ಧಿ ಕೇಂದ್ರಗಳನ್ನು ಉದ್ಘಾಟಿಸಲಾಗಿದೆ. ಈ ಕೇಂದ್ರಗಳು ಕೇವಲ ರಸಗೊಬ್ಬರದ ಮಾರಾಟ ಕೇಂದ್ರಗಳಲ್ಲ, ದೇಶದ ರೈತರೊಂದಿಗೆ ಆಳವಾದ ಬಾಂಧವ್ಯವನ್ನು ಸ್ಥಾಪಿಸುವ ಕಾರ್ಯವಿಧಾನವಾಗಿದೆ ಎಂದರು.
ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ – ಒಂದು ರಾಷ್ಟ್ರ ಒಂದು ರಸಗೊಬ್ಬರವನ್ನು ಸಹ ಪ್ರಾರಂಭಿಸಲಾಗಿದೆ. ಇದು ರೈತರಿಗೆ ಭಾರತ್ ಬ್ರಾಂಡ್ನ ಕೈಗೆಟುಕುವ ಗುಣಮಟ್ಟದ ಗೊಬ್ಬರವನ್ನು ಖಾತ್ರಿಪಡಿಸುವ ಯೋಜನೆಯಾಗಿದೆ ಎಂದರು.
ದ್ರವ ನ್ಯಾನೊ ಯೂರಿಯಾ ಉತ್ಪಾದನೆಯಲ್ಲಿ ಭಾರತವು ಸ್ವಾವಲಂಬನೆಯತ್ತ ವೇಗವಾಗಿ ಸಾಗುತ್ತಿದೆ. ನ್ಯಾನೊ ಯೂರಿಯಾ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದಿಸುವ ಮಾಧ್ಯಮವಾಗಿದೆ. ಯೂರಿಯಾ ತುಂಬಿದ ಚೀಲವನ್ನು ಈಗ ಒಂದೇ ಬಾಟಲಿ ನ್ಯಾನೋ ಯೂರಿಯಾದಿಂದ ಬದಲಾಯಿಸಬಹುದು. ಯೂರಿಯಾದ ಸಾಗಣೆ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ ಎಂದೇಳಿದರು.
ದೇಶಾದ್ಯಂತ 3.25 ಲಕ್ಷಕ್ಕೂ ಹೆಚ್ಚು ರಸಗೊಬ್ಬರ ಅಂಗಡಿಗಳನ್ನು ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಇಂದು ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಇವುಗಳು ರೈತರು ರಸಗೊಬ್ಬರ ಮತ್ತು ಬೀಜಗಳನ್ನು ಖರೀದಿಸಲು ಮಾತ್ರವಲ್ಲದೆ ಮಣ್ಣಿನ ಪರೀಕ್ಷೆಯನ್ನು ಅಳವಡಿಸಲು ಮತ್ತು ಕೃಷಿ ತಂತ್ರಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಪಡೆಯುವ ಕೇಂದ್ರಗಳಾಗಿವೆ. ಎರಡನೆಯದಾಗಿ, ಒಂದು ರಾಷ್ಟ್ರ, ಒಂದು ರಸಗೊಬ್ಬರದಿಂದ, ರೈತರು ಗೊಬ್ಬರದ ಗುಣಮಟ್ಟ ಮತ್ತು ಅದರ ಲಭ್ಯತೆಯ ಬಗೆಗಿನ ಎಲ್ಲಾ ರೀತಿಯ ಗೊಂದಲಗಳನ್ನು ಹೋಗಲಾಡಿಸಲು ಹೊರಟಿದ್ದಾರೆ. ದೇಶದಲ್ಲಿ ಮಾರಾಟವಾಗುವ ಯೂರಿಯಾ ಅದೇ ಹೆಸರು, ಅದೇ ಬ್ರಾಂಡ್ ಮತ್ತು ಅದೇ ಗುಣಮಟ್ಟದ್ದಾಗಿರುತ್ತದೆ ಮತ್ತು ಈ ಬ್ರ್ಯಾಂಡ್ ಭಾರತ್ ಆಗಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ನ್ಯಾನೋ ಯೂರಿಯಾದ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿದ ವಿಶ್ವದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. 600 ಕಿಸಾನ್ ಸಮೃದ್ಧಿ ಕೇಂದ್ರಗಳು ರೈತರನ್ನು ಹಲವು ರೀತಿಯಲ್ಲಿ ಬಲಪಡಿಸುತ್ತವೆ. ಪ್ರದಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರವು (PMKSK) ದೇಶದ ರೈತರ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಮಣ್ಣು, ಬೀಜಗಳು ಮತ್ತು ರಸಗೊಬ್ಬರಗಳ ಪರೀಕ್ಷಾ ಸೌಲಭ್ಯಗಳನ್ನು ಒಳಗೊಂಡಂತೆ ಕೃಷಿ-ಇನ್ಪುಟ್ಗಳನ್ನು (ಗೊಬ್ಬರಗಳು, ಬೀಜಗಳು, ಉಪಕರಣಗಳು) ಒದಗಿಸುತ್ತದೆ. ಈ ಕೇಂದ್ರಗಳು ರೈತರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿವೆ ಎಂದರು.
BIGG NEWS: ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆ; ಬೆಂಗಳೂರಿನಲ್ಲಿ ಚಳಿ ಪ್ರಮಾಣ ಏರಿಕೆ