ಬೆಂಗಳೂರು: ನಗರದಲ್ಲಿ ಮೋಸ, ಸುಲಿಗೆ , ಧರೋಡೆ ಹೆಚ್ಚಾಗಿದೆ. ಅಪರಿಚತರಿಗೆ ಮೊಬೈಲ್‌ ಕೊಡೋ ಮುನ್ನ ಎಚ್ಚರವಾಗಿರಿ. ಅರ್ಜೆಂಟ್ ಒಂದು ಕಾಲ್ ಮಾಡಿ ಕೊಡ್ತೀನಿ ಅಂತ ಮೊಬೈಲ್ ತಗೊಂಡು ವ್ಯಕ್ತಿಗೆ ಮೋಸ ಮಾಡಿದ ಘಟನೆ ನಡೆದಿದೆ.

ಮತ್ತಿಕೆರೆಯಲ್ಲಿ ಮೊಬೈಲ್‌ ಕೊಟ್ಟಿದ್ದಕ್ಕೆ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.ದೇವವ್ರಾತ್ ಸಿಂಗ್ ಅನ್ನೋರ ಬಳಿ ಬಂದ ಅಪರಿಚಿತ ವ್ಯಕ್ತಿಯೊಬ್ಬ, ನನ್ನ ಮೊಬೈಲ್ ನಲ್ಲಿ ಚಾರ್ಜ್ ಇಲ್ಲ ಅರ್ಜೆಂಟ್ ಕಾಲ್ ಮಾಡಬೇಕು ಅಂದಿದ್ದ. ಅವನ ಮಾತು ಕೇಳಿ ದೇವವ್ರಾತ್ ಸಿಂಗ್ ಅವರು ಅಪರಿಚತನ ಕೈಗೆ ಮೊಬೈಲ್ ಕೊಟ್ಟಿದ್ದರು.

ಮೊಬೈಲ್ ಕೈಗೆ ಕೊಟ್ಟ ತಕ್ಷಣ ಆತ ಮತ್ತೊಂದು ಬೈಕ್ ಹತ್ತಿ ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದಾನೆ. ಮೊಬೈಲ್ ನಲ್ಲಿ ದೇವವ್ರಾತ್ ಮತ್ತವನ ಗರ್ಲ್ ಫ್ರೆಂಡ್ ಖಾಸಗಿ ವೀಡಿಯೋಗಳಿದ್ದವು. ಇದನ್ನು ನೋಡಿದ ಅಪರಿಚಿತ, ಇದೀಗ ವ್ಯಕ್ತಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆ ಹಾಕಿದ್ದಾನೆ.

BIGG NEWS: ಸಿದ್ದೇಶ್ವರ ಸ್ವಾಮೀಜಿ ತಂಗುತ್ತಿದ್ದ ತಪೋವನದಲ್ಲಿ ನಿರವಮೌನ

Share.
Exit mobile version