ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ( Congress Leader ) ಸಿಡಿದೆದ್ದಿದ್ದಾರೆ. Pay CM ಪೋಸ್ಟರ್ ಸ್ವತಹ ತಾವೇ ಅಂಟಿಸುತ್ತೇವೆ. ತಮ್ಮನ್ನು ಬಂಧಿಸಿ ಎಂಬುದಾಗಿ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಜಾಥಾ ಮೂಲಕ ಹೊರಟಿದ್ದಾರೆ.
ಇಂದು ಕೆಪಿಸಿಸಿ ಕಚೇರಿ ಇರುವಂತ ಕ್ವೀನ್ಸ್ ರಸ್ತೆಯಿಂದ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ), ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ರೇಸ್ ಕೋರ್ಸ್ ರಸ್ತೆಯ ಟರ್ಫ್ ಕ್ಲಬ್ ನ ಕಾಂಪೌಂಡ್, ಬಿಎಂಟಿಸಿ ಬಸ್ ಗೆ ಪೇ ಸಿಎಂ ಪೋಸ್ಟ್ ( Pay CM Poster ) ಅನ್ನು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಅಂಟಿಸುವುದು ಕಂಡು ಬರುತ್ತಿದೆ.
ಇದಲ್ಲದೇ ಸಿಕ್ಕ ಸಿಕ್ಕ ಕಡೆಯಲ್ಲಿ ಪೇ ಸಿಎಂ ಪೋಸ್ಟ್ ಗಳನ್ನು ಕಾಂಗ್ರೆಸ್ ನಾಯಕರು ಅಂಟಿಸುತ್ತಿದ್ದಾರೆ. ಮತ್ತೊಂದೆಡೆ ಕಾರ್ಯಕರ್ತರು ಕೂಡ ನಗರದ ಹಲವೆಡೆ ಪೇ ಸಿಎಂ ಪೋಸ್ಟರ್ ಅಂಟಿಸುತ್ತಿರೋದನ್ನು ಗಮನಿಸಿದಂತ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
‘ವಿದ್ಯುತ್ ಬಿಲ್’ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿದ್ರೇ ಕಾನೂನು ಕ್ರಮ – BESCOM ಖಡಕ್ ಎಚ್ಚರಿಕೆ