ಬಾಗಲಕೋಟೆ : ವಿಜಯಾನಂದ ಕಾಶಪ್ಪನವರ್ ಗೆ ಬಹಿರಂಗವಾಗಿ ಸಿದ್ದರಾಮಯ್ಯ ಟಿಕೆಟ್ ಘೋಷಿಸಿದ್ದಾರೆ.

ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ ಗ್ರಾಮದಲ್ಲಿ ಬಹಿರಂಗವಾಗಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಿಜಯಾನಂದ ಕಾಶಪ್ಪನವರ್ ಗೆ ಬಹಿರಂಗವಾಗಿ ಟಕೆಟ್ ಘೋಷಿಸುವ ಮೂಲಕ ಮತ್ತೆ ಡಿಕೆಶಿಗೆ ಸಿದ್ದು ಡಿಚ್ಚಿ ಕೊಟ್ಟಿದ್ದಾರೆ. ಇತ್ತೀಚೆಗೆ ಟಿಕೆಟ್ ಘೋಷಣೆ ಕುರಿತು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು. ಯಾರೂ ಕೂಡ ಬಹಿರಂಗವಾಗಿ ಟಿಕೆಟ್ ಘೋಷಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ವಿಜಯಾನಂದ ಕಾಶಪ್ಪನವರ್ ಗೆ ಬಹಿರಂಗವಾಗಿ ಸಿದ್ದರಾಮಯ್ಯ ಟಿಕೆಟ್ ಘೋಷಿಸಿದ್ದಾರೆ.

ನಾವು ಅಧಿಕಾರಕ್ಕೆ ಬಂದರೇ 7 ಕೆಜಿ ಅಲ್ಲ, 10 ಕೆಜಿ ಅಕ್ಕಿ ಘೋಷಣೆ
ನಮ್ಮ ಕಾಂಗ್ರೆಸ್ ಪಕ್ಷ  ಮುಂಬರುವಂತ ಚುನಾವಣೆಯಲ್ಲಿ ಬಹುಮತದಿಂದ ಗೆದ್ದು, ಅಧಿಕಾರಕ್ಕೆ ಬಂದರೇ 7 ಕೆಜಿ ಅಲ್ಲ, 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಎಂಬುದಾಗಿ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಘೋಷಿಸಿದ್ದಾರೆ.

ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸ್ವಾತಂತ್ರ್ಯ ಬಂದಾಗ ನಮಗೆ ಆಹಾರ ಸ್ವಾಲಂಬನೆ ಇರಲಿಲ್ಲ. ಆಹಾರ ಸ್ವಾಲಂಬನೆ ಮಾಡಿದ್ದು ಇಂದಿರಾ ಗಾಂದಿಯವರ ನೇತೃತ್ವದ ಸರ್ಕಾರ ಎಂದು ಹೇಳಿದರು.

ನಾನು ಸಿಎಂ ಆದಮೇಲೆ ಉಚಿತವಾಗಿ ತಲಾ 7 ಕೆಜಿ ಅಕ್ಕಿ ಕೊಟ್ಟೆ. ಹಸಿವು ಮುಕ್ತ ರಾಜ್ಯವಾಗಲೇ ಬೇಕು ಎಂಬ ಹಿನ್ನಲೆಯಲ್ಲಿ 7 ಕೆಜಿ ಅಕ್ಕಿ ನೀಡಲಾಯಿತು. ಆದ್ರೇ ಅದನ್ನೇ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೆ. ಪುಕ್ಕಟ್ಟೆ ಪ್ರಚಾರವನ್ನು ಪಡೆದರು ಅಂದರು ಅಂತ ಹೇಳಿದರು. ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿದ್ದರೇ ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವಂತ ರಾಜ್ಯಗಳಲ್ಲಿ ಉಚಿತವಾಗಿ ಏಕೆ ಕೊಡುತ್ತಿಲ್ಲ? ಹಸಿವು ಮುಕ್ತ ರಾಜ್ಯವನ್ನಾಗಿ ಏಕೆ ಮಾಡಲಿಲ್ಲ ಎಂಬುದಾಗಿ ಪ್ರಶ್ನಿಸಿದರು.

BIG NEWS: ನಾವು ಅಧಿಕಾರಕ್ಕೆ ಬಂದರೇ 7 ಕೆಜಿ ಅಲ್ಲ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ- ಸಿದ್ಧರಾಮಯ್ಯ ಘೋಷಣೆ

ಕಾಂಗ್ರೆಸ್ 2 ಸ್ಟೇರಿಂಗ್ ಇರುವ ಬಸ್, ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ : ಸಚಿವ ಸುಧಾಕರ್ ಕಿಡಿ

Share.
Exit mobile version