ಚಿತ್ರದುರ್ಗದಲ್ಲಿ ಮೇಲ್ಛಾವಣಿ ಕುಸಿದು ಓರ್ವ ವ್ಯಕ್ತಿ ದುರ್ಮರಣ

ಚಿತ್ರದುರ್ಗ: ಜಿಲ್ಲೆಯಲ್ಲಿ ಮನೆಯ ಮೇಲ್ಛಾವಣಿ ಸರಿ ಮಾಡೋ ಸಂದರ್ಭದಲ್ಲಿ ಕುಸಿದು ಬಿದ್ದ ಪರಿಣಾಮ, ಓರ್ವ ವ್ಯಕ್ತಿ ಸಾವನ್ನಪ್ಪಿರೋ ಘಟನೆ ಚಳ್ಳಕೆರೆಯ ರಾಮಜೋಗಿಹಳ್ಳಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ಮುರುಳೀಧರ್ (45) ಎಂಬುವರು ತಮ್ಮ ಮನೆಯ ಮೇಲ್ಛಾವಣಿ ಸರಿ ಮಾಡೋದಕ್ಕೆ ಮನೆ ಮೇಲೆ ಹತ್ತಿದ್ದರು. ಮನೆಯ ಮೇಲ್ಛಾವಣಿ ದುರಸ್ಥಿ ವೇಳೆಯಲ್ಲಿ ಕುಸಿದ ಪರಿಣಾಮ, ಅದರಡಿಯಲ್ಲಿ ಸಿಲುಕಿ ಮುರಳೀಧರ್ ದುರ್ಮರಣ ಹೊಂದಿರೋದಾಗಿ ತಿಳಿದು ಬಂದಿದೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ನಾಡಪ್ರಭು ಕೆಂಪೇಗೌಡ’ರು … Continue reading ಚಿತ್ರದುರ್ಗದಲ್ಲಿ ಮೇಲ್ಛಾವಣಿ ಕುಸಿದು ಓರ್ವ ವ್ಯಕ್ತಿ ದುರ್ಮರಣ