ನವದೆಹಲಿ : ಮೊಹಾಲಿಯಲ್ಲಿ ಹಾಲಿ ಟಿ20 ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ತೋರಿದ ಪ್ರದರ್ಶನದಿಂದಾಗಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸರಣಿಯ ಆರಂಭಿಕ ಪಂದ್ಯದಲ್ಲಿ ಪಂದ್ಯದ ಕೊನೆಯ ನಾಲ್ಕು ಓವರ್’ಗಳಲ್ಲಿ ಭಾರತ ಮೇಲುಗೈ ಸಾಧಿಸಿತ್ತು, ಆದರೆ ಹಿಂದಿರುಗಿದ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಒತ್ತಡಕ್ಕೆ ಮಣಿದು ಡೆತ್ ಓವರ್ ಗಳಲ್ಲಿ ಗಣನೀಯ ಮೊತ್ತವನ್ನ ರಕ್ಷಿಸಲು ವಿಫಲರಾದರು. ಭಾರತದ ಅನುಭವಿ ವೇಗಿ 17 ಮತ್ತು 19 ನೇ ಓವರ್ ಬೌಲ್ ಮಾಡಿದರು, ಇದು ಕ್ರಮವಾಗಿ 15 ಮತ್ತು 16 ರನ್ಗಳನ್ನು ನೀಡಿತು.

208 ರನ್’ಗಳ ಬೃಹತ್ ಮೊತ್ತವನ್ನ ಬೆನ್ನಟ್ಟಿದ ಆಸ್ಟ್ರೇಲಿಯಾ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಸೋಲು ಅನುಭವಿಸಿದ್ದು, ಡೆತ್’ನಲ್ಲಿ ತನ್ನ ನಿಯಂತ್ರಣದ ಕೊರತೆಯಿಂದಾಗಿ ಏಸ್ ಬೌಲರ್  ಟ್ರೋಲ್ ಮಾಡಲಾಗ್ತಿದೆ. ಸಧ್ಯ ಭುವನೇಶ್ವರ್ ಅವರ ಪತ್ನಿ ನೂಪುರ್ ನಗರ್ ಅವ್ರು ತಮ್ಮ ಪತಿಯ ಸಹಾಯಕ್ಕೆ ಧಾಮಿಸಿದ್ದು, ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಟ್ರೋಲಿಗರನ್ನ ತರಾಟೆಗೆ ತೆಗೆದುಕೊಂಡರು.

“ಇತ್ತೀಚಿನ ದಿನಗಳಲ್ಲಿ, ಜನರು ಎಷ್ಟು ನಿರರ್ಥಕರಾಗಿದ್ದಾರೆಂದ್ರೆ, ಅವ್ರು ಒಳ್ಳೆಯದ್ದನ್ನ ಮಾಡಲು ಸಮಯ ಸಿಗ್ತಿಲ್ಲ. ದ್ವೇಷ ಮತ್ತು ಅಸೂಯೆಯನ್ನ ಹರಡಲು ತುಂಬಾ ಸಮಯ ಹೊಂದಿದ್ದಾರೆ… ಅವರೆಲ್ಲರಿಗೂ ನನ್ನ ಸಲಹೆಯೆಂದರೆ – ನಿಮ್ಮ ಮಾತುಗಳಿಂದ ಯಾರೂ ಪ್ರಭಾವಿತರಾಗುವುದಿಲ್ಲ ಅಥವಾ ನಿಮ್ಮ ಅಸ್ತಿತ್ವದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದ್ದರಿಂದ ದಯವಿಟ್ಟು ನಿಮ್ಮನ್ನು ಉತ್ತಮಗೊಳಿಸಲು ಆ ಸಮಯವನ್ನ ಕಳೆಯಿರಿ, ಆದ್ರೆ ಅದಕ್ಕೆ ತುಂಬಾ ಕಡಿಮೆ ಸ್ಕೋಪ್ ಇದೆ!!” ಎಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಬರೆದಿದ್ದಾರೆ.

Share.
Exit mobile version