ಬೆಂಗಳೂರು : ಬೆಂಗಳೂರಿನ ಪ್ರಸಿದ್ಧ ವೆಂಕಟೇಶ್ವರ ದೇಗುಲದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡದೇ ಬಂದ ಕಾರಣಕ್ಕೆ ಜುಟ್ಟು ಹಿಡಿದು ಹೊರಗೆ ತಳ್ಳಿದ ನೀಚಕೃತ್ಯ ಬೆಳಕಿಗೆ ಬಂದಿದೆ.
ಡಿಸೆಂಬರ್ 22 ರಂದು ವೆಂಕಟೇಶ್ವರ ದೇಗುಲಕ್ಕೆ ಬಂದ ಮಹಿಳೆ ಹೇಮಾವತಿ ಬಂದಿದ್ದರು ಆ ಸಂದರ್ಭದಲ್ಲಿ ನೀವು ಸ್ನಾನ ಮಾಡದೇ ದೇಗುಲಕ್ಕೆ ಪ್ರವೇಶಿಸಿದ್ದೀರಿ ಎಂದು ಆರೋಪಿಸಿ, ಆಕೆಯ ತಲೆ ಕೂದಲನ್ನು ಹಿಡಿದು ಎಳೆದು ಹೊರಗೆ ತಳ್ಳಿದ್ದು, ಕಬ್ಬಿಣದ ರಾಡ್ ಮೂಲಕ ಆಕೆ ಹೊಡೆಯಲಾಗಿದೆ. ಈ ವಿಚಾರ ಯಾರಿಗಾದ್ರೂ ಹೇಳಿದ್ರೆ ನಿಮ್ಮನ್ನ ಸುಮ್ಮನೆ ಬಿಡಲ್ಲ ಎಂದು ಕೂಡ ಜೀವ ಬೆದರಿಕೆ ಹಾಕಿದ್ದಾರೆ.
ಮುನಿಕೃಷ್ಣ ಹಲ್ಲೆಗೈದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಸಂಧರ್ಭದಲ್ಲಿ ಅರ್ಚಕರು ಮುನಿಕೃಷ್ಣ ಅವರನ್ನು ತಡೆದರು . ಈತ ನಡೆಸಿದ ಎಲ್ಲಾ ನೀಚಕೃತ್ಯ ದೇವಸ್ಥಾನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಆರೋಪಿ ಮುನಿಕೃಷ್ಣ ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.