ಬೆಂಗಳೂರು :  ಬೆಂಗಳೂರಿನ  ಪ್ರಸಿದ್ಧ ವೆಂಕಟೇಶ್ವರ ದೇಗುಲದಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡದೇ ಬಂದ ಕಾರಣಕ್ಕೆ ಜುಟ್ಟು ಹಿಡಿದು ಹೊರಗೆ ತಳ್ಳಿದ ನೀಚಕೃತ್ಯ  ಬೆಳಕಿಗೆ ಬಂದಿದೆ. 

BIGG NEWS : ‘ಸಿದ್ದುಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಾಳಿ’ಯಿದೆ: ಟ್ವೀಟ್‌ ಮೂಲಕ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

ಡಿಸೆಂಬರ್ 22 ರಂದು ವೆಂಕಟೇಶ್ವರ ದೇಗುಲಕ್ಕೆ ಬಂದ ಮಹಿಳೆ ಹೇಮಾವತಿ ಬಂದಿದ್ದರು ಆ ಸಂದರ್ಭದಲ್ಲಿ ನೀವು  ಸ್ನಾನ ಮಾಡದೇ ದೇಗುಲಕ್ಕೆ ಪ್ರವೇಶಿಸಿದ್ದೀರಿ ಎಂದು ಆರೋಪಿಸಿ, ಆಕೆಯ ತಲೆ ಕೂದಲನ್ನು ಹಿಡಿದು ಎಳೆದು ಹೊರಗೆ ತಳ್ಳಿದ್ದು, ಕಬ್ಬಿಣದ ರಾಡ್‌ ಮೂಲಕ ಆಕೆ ಹೊಡೆಯಲಾಗಿದೆ. ಈ ವಿಚಾರ ಯಾರಿಗಾದ್ರೂ ಹೇಳಿದ್ರೆ ನಿಮ್ಮನ್ನ ಸುಮ್ಮನೆ ಬಿಡಲ್ಲ ಎಂದು ಕೂಡ ಜೀವ ಬೆದರಿಕೆ ಹಾಕಿದ್ದಾರೆ.

BIGG NEWS : ‘ಸಿದ್ದುಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಾಳಿ’ಯಿದೆ: ಟ್ವೀಟ್‌ ಮೂಲಕ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

ಮುನಿಕೃಷ್ಣ ಹಲ್ಲೆಗೈದ ವ್ಯಕ್ತಿ ಎಂದು ಗುರುತಿಸಲಾಗಿದೆ.  ಈ ಸಂಧರ್ಭದಲ್ಲಿ ಅರ್ಚಕರು ಮುನಿಕೃಷ್ಣ ಅವರನ್ನು  ತಡೆದರು . ಈತ ನಡೆಸಿದ ಎಲ್ಲಾ ನೀಚಕೃತ್ಯ  ದೇವಸ್ಥಾನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಆರೋಪಿ ಮುನಿಕೃಷ್ಣ ಬಂಧಿಸಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

BIGG NEWS : ‘ಸಿದ್ದುಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಚಾಳಿ’ಯಿದೆ: ಟ್ವೀಟ್‌ ಮೂಲಕ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ

Share.
Exit mobile version