ನಾಗ್ಪುರ: ಮಗಳು ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ಅವಳಿಗೆ ಯಾವುದೋ ದುಷ್ಟಶಕ್ತಿ ಆವರಿಸಿರಬಹುದೆಂದು ಭಾವಿಸಿ, ಪೋಷಕರೇ ಮಾಟಮಂತ್ರ ಮಾಡಲು ಮುಂದಾಗಿ ಮಗಳನ್ನೇ ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ.

ಏನಿದು ಘಟನೆ?

ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಹಾಗೂ 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‌ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿ ಮನೆಗೆ ಮರಳಿದ್ದರು.

ಅಂದಿನಿಂದ ತನ್ನ ಕಿರಿಯ ಮಗಳ ವರ್ತನೆ ಬದಲಾಗಿತ್ತು. ಇದರಿಂದ ಅನುಮಾನಗೊಂಡ ತಂದೆ ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಮಗಳು ಒಳಗಾಗಿರಬಹುದೆಂದು ಅವನು ನಂಬಿದ್ದನು. ಹೀಗಾಗಿ, ಮಾಟಮಂತ್ರ ಮಾಡಲು ಮುಂದಾಗಿದ್ದಾನೆ.

ಹೀಗಾಗಿ, ಹುಡುಗಿಯ ಪೋಷಕರು ಮತ್ತು ಚಿಕ್ಕಮ್ಮ ರಾತ್ರಿಯಲ್ಲಿ ಮಾಟಮಂತ್ರ ಮಾಡಿದ್ದಾರೆ. ಇದೇ ವೇಳೆ ಅದರ ವಿಡಿಯೋವನ್ನು ಸಹ ಮಾಡಿದ್ದಾರೆ. ವಿಡಿಯೋದಲ್ಲಿ, ಬಾಲಕಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರುವುದು ಕಂಡುಬಂದಿದೆ. ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೇ ಉತ್ತರಿಸಿಲ್ಲ. ಹೀಗಾಗಿ,
ಮೂವರು ಆರೋಪಿಗಳು ಮಗುವಿಗೆ ಕಪಾಳಮೋಕ್ಷ ಮಾಡಿ ತೀವ್ರವಾಗಿ ಥಳಿಸಿದ್ದಾರೆ, ನಂತರ ಅವಳು ಪ್ರಜ್ಞಾಹೀನಳಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ. ನಂತ್ರ
ಆರೋಪಿಗಳು ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ. ಆದ್ರೆ, ಅಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ನಂತ್ರ, ಬಾಲಕಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈ ವೇಳೆ, ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅನುಮಾಗೊಂಡು ಕಾರಿನ ಚಿತ್ರವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾನೆ. ಈ ಬಗ್ಗೆ ವೈದ್ಯರು ಪೊಲೀಸರಿಗೆ ದೂರು ನೀಡಿದ್ದರು. ಛಾಯಾಚಿತ್ರದಲ್ಲಿರುವ ವಾಹನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ.

ತನಿಖೆ ಮುಂದುವರೆಸಿದ ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಪೊಲೀಸರು ಮಗುವಿನ ತಂದೆ ಸಿದ್ಧಾರ್ಥ್ ಚಿಮ್ನೆ (45), ತಾಯಿ ರಂಜನಾ (42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ಅವರನ್ನು ಬಂಧಿಸಿದ್ದಾರೆ.

BIGG BREAKING NEWS : ಇತಿಹಾಸ ನಿರ್ಮಿಸಿದ ‘ ISRO’: ಮಕ್ಕಳೇ ತಯಾರಿಸಿದ ‘ಆಜಾದಿ ಸ್ಯಾಟ್’ ಉಪಗ್ರಹ ಉಡಾವಣೆ

Breaking news: ISROದ ಅತೀ ಚಿಕ್ಕ ರಾಕೆಟ್​ ಯಶಸ್ವಿ ಉಡಾವಣೆ: ಕಕ್ಷೆ ಸೇರಿದ ಮಕ್ಕಳ ರೂಪಿತ ʻಆಜಾದಿ ಸ್ಯಾಟ್ʼ ಉಪಗ್ರಹ!

ಕ್ಯೂಬಾ: ಸಿಡಿಲು ಬಡಿತಕ್ಕೆ ಹೊತ್ತಿಯುರಿದ ತೈಲ ಸಂಗ್ರಹಣಾ ಘಟಕ: 121 ಮಂದಿಗೆ ಗಾಯ, 17 ಜನ ನಾಪತ್ತೆ

Share.
Exit mobile version