ಬೆಳಗಾವಿ: ಸಚಿವ ಉಮೇಶ ಕತ್ತಿ ಅವರ ನಿಧನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನೀರವ ಮೌನ ಆವರಿಸಿದೆ.
ಉಮೇಶ ಕತ್ತಿ ಅವರ ತವರೂರು ಬೆಲ್ಲದ ಬಾಗೇವಾಡಿಯಲ್ಲಿ ಪಾರ್ಥೀವ ಶರೀರ ಅಂತಿಮ ದರ್ಶನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

BIGG BREAKING NEWS: ದೆಹಲಿಯಲ್ಲಿ ಮುಂದಿನ ವರ್ಷ ಜನವರಿ1 ರವರೆಗೆ ಪಟಾಕಿ ನಿಷೇಧ; ಕೇಂದ್ರ ಸರ್ಕಾರದಿಂದ ಆದೇಶ

 

ಇಂದು ಸಂಜೆ ಐದು ಗಂಟೆಗೆ ಅಂತ್ಯಕ್ರಿಯೆ ಮಾಡಲಾಗಿದೆ. ಲಿಂಗಾಯುತ ಸಮುದಾಯದ ವಿಧಿವಿಧಾನಗಳಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಇಡೀ ಊರು ಸ್ಮಶಾನ ಮೌನವಾಗಿದೆ.
ಈಗಾಗಲೇ ಅಂತಿಮ ದರ್ಶನಕ್ಕೆ ಆರ್ಮಿ ವಾಹನ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನೇನು ಕೆಲ ಹೊತ್ತಿನಲ್ಲಿ ಕತ್ತಿ ಅವರ ಪಾರ್ಥೀವ ಶರೀರ ರವಾನಿಸಲಾಗಿದೆ. ಹೈದರಾಬಾದ್‌ ನಿಂದ ಹೆಚ್‌ ಎಎಲ್‌ ಗೆ ವಿಶೇಷ ವಿಮಾನ ಬಂದಿದೆ. ಇನ್ನು ಮಧ್ಯಾಹ್ನ ಹೊತ್ತಿಗೆ ಬೆಳಗಾವಿಗೆ ತಲುಪಲಿದೆ.

Share.
Exit mobile version