ಬೆಳಗಾವಿ: ಸಚಿವ ಉಮೇಶ್‌ ಕತ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ದೊಡ್ಡಪ್ಪ ನೆನದು ಪುತ್ರ ಪೃಥ್ವಿ ಕತ್ತಿ ಕಣ್ಣೀರು ಹಾಕಿದ್ದಾರೆ.

BIGG NEWS : ನಮ್ಮೆಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಉಮೇಶ್ ಕತ್ತಿ ನಿಧನದಿಂದ ತೀವ್ರ ಆಘಾತವಾಗಿದೆ : ಕತ್ತಿ ನಿಧನಕ್ಕೆ ಮಾಜಿ ಸಿಎಂ ಹೆಚ್ ಡಿಕೆ ಸಂತಾಪ

 

ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ದೊಡ್ಡಪ್ಪ ಸಾವನ್ನಪ್ಪಿದ್ದು ನನಗೆ ನಂಬಲು ಆಗುತ್ತಿಲ್ಲ. ಅವರು ಇನ್ನೂ ಮನೆಗೆ ಬಂದು ನನಗೆ ಬೈಯುತ್ತಾರೆ ಎನ್ನುವ ಆಶಯದಲ್ಲಿದ್ದೇನೆ. ದೇವರು ಇನ್ನೊಮ್ಮೆ ದೊಡ್ಡಪ್ಪನಿಗೆ ಜೀವ ಕೊಡಲಿ ಎಂದು ಕಣ್ಣೀರು ಹಾಕಿದ್ದಾರೆ.
ಅವರು ನನ್ನ ಪಾಲಿಗೆ ತಂದೆ-ತಾಯಿಯಾಗಿದ್ದರು. ನನ್ನ ತಂದೆ ತಾಯಿ ಪ್ರೀತಿಗಿಂತ ಹೆಚ್ಚು ನನ್ನ ದೊಡ್ಡಪ್ಪ ಇದ್ದರು ಎಂದು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಪುತ್ರ ಪೃಥ್ವಿ ಕತ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

 

Share.
Exit mobile version