ನವದೆಹಲಿ: ಸ್ಯಾನಿಟರಿ ಪ್ಯಾಡ್ ಮೇಲೆ ಶ್ರೀಕೃಷ್ಣನ ಚಿತ್ರವನ್ನು ಹೊಂದಿರುವ ‘ಮಸೂಮ್ ಸಾವಾಲ್’ ಚಿತ್ರದ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಈ ನಡುವೆ ವಿವಾದಕ್ಕೆ ಸಂಬಂಧಪಟ್ಟಂಥೆ ಚಿತ್ರದ ನಿರ್ದೇಶಕ ಮತ್ತು ನಟಿ ನಿರ್ಮಾಪಕರು ಮಾಹಿತಿ ನೀಡಿದ್ದು, ಇದರ ಹಿಂದೆ ಯಾರನ್ನೂ ನೋಯಿಸುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

ಚಿತ್ರದಲ್ಲಿ ವಕೀಲೆಯಾಗಿ ನಟಿಸಿರುವ ನಟಿ ಏಕಾವಳಿ ಖನ್ನಾ ಈ ವಿಷಯದ ಬಗ್ಗೆ ಹೀಗೆ ಹೇಳುತ್ತಾರೆ: “ಮೊದಲನೆಯದಾಗಿ, ಪೋಸ್ಟರ್ಗೆ ಬಂದ ಯಾವುದೇ ಪ್ರತಿಕ್ರಿಯೆಗಳ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಅದು ನಿಜವಾಗಿದ್ದರೆ, ನಿರ್ಮಾಪಕರಿಗೆ ಯಾರ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವಿಲ್ಲ ಎಂದು ನಾನು ಹೇಳಬಲ್ಲೆ.” ಸ್ಯಾನಿಟರಿ ನ್ಯಾಪ್ಕಿನ್ ಮೇಲೆ ಹಿಂದೂ ದೇವರ ಚಿತ್ರದೊಂದಿಗೆ “ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ” ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಚಿತ್ರದ ನಿರ್ದೇಶಕ ಸಂತೋಷ್ ಉಪಾಧ್ಯಾಯ ಅವರು ಕೆಲವೊಮ್ಮೆ “ವಿಷಯಗಳನ್ನು ನೋಡುವ ನಮ್ಮ ದೃಷ್ಟಿಕೋನವು ತಪ್ಪು, ಇದು ತಪ್ಪು ಕಲ್ಪನೆಗೆ ಕಾರಣವಾಗುತ್ತದೆ” ಎಂದು ಹೇಳಿದರು.

Share.
Exit mobile version