ತುಮಕೂರು: ಬಂಡೆನಾಗನ ಮೇಲೆ ಕೊಲೆಗೆ ಯತ್ನಿಸಿ ಮಚ್ಚು ಬಿಸಿ ಪಾರಿಯಾಗಿದ್ದಂತ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರೋ ಘಟನೆ ತುಮಕೂರಿನ ಒಕ್ಕೋಡಿ ಬಳಿಯಲ್ಲಿ ನಡೆದಿದೆ.

ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ ಬಂಡೆ ನಾಗನ ಮೇಲೆ ಕೊಲೆಗೆ ಮನೋಜ್ ಆಲಿಯಾಸ್ ಮಂಡೇಲಾ ಯತ್ನಿಸಿದ್ದನು. ರೌಡಿ ಶೀಟರ್ ಆಗಿದ್ದಂತ ಮನೋಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು.

ಮನೋಜ್ ಬೀಸಿದಂತ ಮಚ್ಚೇಟಿನಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಂತ ಬಂಡೆನಾಗ, ಮನೋಜ್ ತುಮಕೂರಿನ ಒಕ್ಕೋಡಿ ಬಳಿಯಲ್ಲಿ ತಲೆಮರೆಸಿಕೊಂಡಿರೋ ಮಾಹಿತಿಯನ್ನು ನೀಡಿದ್ದನು.

ಈ ಮಾಹಿತಿ ಆಧರಿಸಿ ಮನೋಜ್ ಆಲಿಯಾಸ್ ಮಂಡೇಲಾ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಅವರ ಮೇಲೆಯೇ ಹಲ್ಲೆ ನಡೆಸಿ, ಪರಾರಿಯಾಗೋದಕ್ಕೆ ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

BIG NEWS: ‘ರಾಜ್ಯ ಸರ್ಕಾರಿ ನೌಕರ’ರಿಗೆ ಶುಭಸುದ್ದಿ: ‘NPS ರದ್ದತಿ’ ಬಗ್ಗೆ ‘ಸಿಎಂ ಸಿದ್ಧರಾಮಯ್ಯ’ ಮಹತ್ವದ ಘೋಷಣೆ

ಬೆಂಗಳೂರಲ್ಲಿ ‘ಮಹಿಳಾ IPS ಅಧಿಕಾರಿ’ಗೆ ಬೈಕ್ ಸವಾರನಿಂದ ಬೆದರಿಕೆ: ಅರೆಸ್ಟ್, ಜೈಲುಪಾಲು

Share.
Exit mobile version