BREAKING NEWS : ‘ಕಿಲ್ಲರ್ ರಸ್ತೆ ಗುಂಡಿ’ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಹಬ್ಬಕ್ಕೆ ಊರಿಗೆ ಹೊರಟ ಕಾರ್ಮಿಕನ ದಾರುಣ ಸಾವು

ಬೆಂಗಳೂರು :  ಕಿಲ್ಲರ್ ರಸ್ತೆ ಗುಂಡಿ’ಗೆ ಮತ್ತೊಂದು ಬಲಿಯಾಗಿದ್ದು,  ಹಬ್ಬಕ್ಕೆ ಊರಿಗೆ ಹೊರಟ ಕಾರ್ಮಿಕ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋದ ಬೈಕ್ ಸವಾರ ಕಾರ್ಮಿಕ ತಿಪ್ಪೆಸ್ವಾಮಿ (45) ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಪಾವಗಡ ಮೂಲದ ತಿಪ್ಪೆಸ್ವಾಮಿ ಕುಟುಂಬ ನಿರ್ವಹಣೆಗಾಗಿ ಬೆಂಗಳೂರು ಉತ್ತರ ತಾಲೂಕಿನ ಮಾದಾವರದಲ್ಲಿ ಕೂಲಿ ಮಾಡಿ ವಾಸಿಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆ ಸ್ವಂತ ಊರು ಪಾವಗಡಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು. … Continue reading BREAKING NEWS : ‘ಕಿಲ್ಲರ್ ರಸ್ತೆ ಗುಂಡಿ’ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ : ಹಬ್ಬಕ್ಕೆ ಊರಿಗೆ ಹೊರಟ ಕಾರ್ಮಿಕನ ದಾರುಣ ಸಾವು