ಮಹಾರಾಷ್ಟ್ರ : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬಂದ ಜೀವ ಬೆದರಿಕೆಯ ಬೆನ್ನಲ್ಲೇ, ಮಹಾರಾಷ್ಟ್ರ ಸರ್ಕಾರವು ಬಾಲಿವುಡ್‌ ನಟ ಸಲ್ಮಾನ್ ಖಾನ್(Salman Khan) ಮತ್ತು ಅಕ್ಷಯ್ ಕುಮಾರ್(Akshay Kumar) ಸೇರಿದಂತೆ ಕೆಲವು ಬಾಲಿವುಡ್ ತಾರೆಯರ ಭದ್ರತೆಯನ್ನು ಹೆಚ್ಚಿಸಿದೆ.

ಸಲ್ಮಾನ್ ಈಗ Y+ ವರ್ಗದಲ್ಲಿ ಇರುತ್ತಾರೆ. ವಿವಿಧ ಪಾಳಿಗಳಲ್ಲಿ ನಾಲ್ಕು ಸಶಸ್ತ್ರ ಗಾರ್ಡ್‌ಗಳು ಅವರನ್ನು ರಕ್ಷಿಸುತ್ತಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಆರೋಪ ಎದುರಿಸುತ್ತಿದೆ.

ರಾಜ್ಯ ಸರ್ಕಾರವು ಬಾಲಿವುಡ್ ನಟ ಅಕ್ಷಯ್ ಕುಮಾರ್‌ಗೆ ಎಕ್ಸ್ ಕೆಟಗರಿ ಭದ್ರತೆಯನ್ನು ಒದಗಿಸಿದೆ. ಅಂದರೆ, ಮೂರು ಪಾಳಿಯಲ್ಲಿ ಮೂವರು ವೈಯಕ್ತಿಕ ಭದ್ರತಾ ಅಧಿಕಾರಿಗಳು ಅವರನ್ನು ರಕ್ಷಿಸುವ ಕೆಲಸ ಮಾಡುತ್ತಾರೆ.

ದೆಹಲಿ ಪೊಲೀಸರ ಇನ್ಪುಟ್ ಮತ್ತು ಮಹಾರಾಷ್ಟ್ರ ಪೊಲೀಸರು ಮೂಸೆವಾಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಬಿಷ್ಣೋಯ್ ಗ್ಯಾಂಗ್ ಸದಸ್ಯರನ್ನು ಬಂಧಿಸಿದ ನಂತರ ಮುಂಬೈ ಪೊಲೀಸರು ಮತ್ತು ರಾಜ್ಯ ಸರ್ಕಾರವು ಸಲ್ಮಾನ್ ಖಾನ್ ಬಗ್ಗೆ ಚಿಂತಿಸುತ್ತಿದೆ. ನಟ ಸಲ್ಮಾನ್ ಈಗ ಮುಂಬೈ ಪೊಲೀಸರಿಂದ ನಿಯಮಿತವಾಗಿ ರಕ್ಷಣೆ ಪಡೆಯುತ್ತಿದ್ದಾರೆ. ಪೊಲೀಸರು ಈ ಸಂಬಂಧ ರಾಜ್ಯ ಗೃಹ ಇಲಾಖೆಯೊಂದಿಗೆ ವರದಿಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಸಲ್ಮಾನ್ ಗೆ ವೆಪನ್ ಲೈಸೆನ್ಸ್ ನೀಡಲಾಗಿದೆ.

ಮುಂಬೈನಲ್ಲಿ ಸಲ್ಮಾನ್ ಮೇಲೆ ದಾಳಿ ಮಾಡುವ ಬಗ್ಗೆ ​​ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಯೋಚಿಸಿದ್ದರು ಎಂದು ಪಂಜಾಬ್, ದೆಹಲಿ ಮತ್ತು ಮಹಾರಾಷ್ಟ್ರದ ಪೊಲೀಸರು ಕಂಡುಕೊಂಡಿದ್ದಾರೆ. ಇವರು ಸಲ್ಮನ್‌ರನ್ನು ಕೊಲ್ಲಲು ಎರಡು ಬಾರಿ ಪ್ರಯತ್ನಿಸಿದ್ದರು. ಮೊದಲ ಬಾರಿಗೆ 2017 ರಲ್ಲಿ ಅವರ ಹುಟ್ಟುಹಬ್ಬದಂದು ಅವರ ಬಾಂದ್ರಾ ಮನೆಯ ಹೊರಗೆ ಮತ್ತು ಇನ್ನೊಂದು 2018 ರಲ್ಲಿ ಅವರ ಪನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಯತ್ನಿಸಿದ್ದರು ಎನ್ನಲಾಗಿದೆ.

BIG NEWS : ಅಕ್ರಮ ಗಣಿಗಾರಿಕೆ ಪ್ರಕರಣ: ನಾಳೆ ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಸಿಎಂʻ ಹೇಮಂತ್ ಸೊರೇನ್ʼಗೆ ಇಡಿ ಸಮನ್ಸ್

BIG NEWS : ʻಟ್ವಿಟರ್‌ʼನಲ್ಲಿ ಕೆಲಸ ಮಾಡಲು 50 ಟೆಸ್ಲಾ ಉದ್ಯೋಗಿಗಳನ್ನು ನೇಮಕ ಮಾಡಿದ ʻಎಲೋನ್ ಮಸ್ಕ್ʼ | Elon Musk

BIGG NEWS: ರಾಜ್ಯದಲ್ಲಿ ಇನ್ನೂ 5 ದಿನ ಗುಡುಗು ಸಹಿತ ಭಾರಿ ಮಳೆ; ಬೆಂಗಳುರಿನಲ್ಲಿ ಮೋಡ ಕವಿದ ವಾತಾವರಣ| Rain alert

BIG NEWS : ಅಕ್ರಮ ಗಣಿಗಾರಿಕೆ ಪ್ರಕರಣ: ನಾಳೆ ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಸಿಎಂʻ ಹೇಮಂತ್ ಸೊರೇನ್ʼಗೆ ಇಡಿ ಸಮನ್ಸ್

Share.
Exit mobile version