ಧಾರವಾಡ :  ಯುವಕ ಯುವತಿ ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಘಟನೆ ನವಲಗುಂದ ಪಟ್ಟಣದಲ್ಲಿ ನಿನ್ನೆ ನಡೆದಿದ್ದು, ಕಾರಣ ನಿಗೂಢವಾಗಿದೆ. 

ಬಸವರಾಜ ತಳವಾರ ಎಂಬ  ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಯುವಕ ತನ್ನ ಪ್ರೇಮಿ ( ಗರ್ಲ್ ಫ್ರೆಂಡ್) ಜೊತೆ ನಿನ್ನೆ ಲಾಡ್ಜ್ ಗೆ ತೆರಳಿದ್ದರು. ನಂತರ ಸಂಜೆ ವೇಳೆ ಇಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Gujarat poll results: 140 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಗುಜರಾತಿನ ಮೋರ್ಬಿ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು

BIGG NEWS : ಬೆಳಗಾವಿ ಗಡಿ ವಿವಾದ : ‘MES’, ‘ಶಿವಸೇನೆ’ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಿಎಂ ಬೊಮ್ಮಾಯಿಗೆ ಕರವೇ ನಾರಾಯಣ ಗೌಡ ಪತ್ರ

Share.
Exit mobile version