ಕೆಎನ್ಎನ್ಡಿಜಿಟಲ್ ಡೆಸ್ಕ್ : ನಿಯಮಗಳಿಲ್ಲದೇ ಮನುಷ್ಯ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಸ್ಥಿರ ಸಮಾಜಕ್ಕೆ ಕೆಲವು ನಿಯಮಗಳ ಅಗತ್ಯವಿದೆ. ಪ್ರತಿಯೊಂದು ಧರ್ಮ ಮತ್ತು ಜಾತಿ ಕೂಡ ತನ್ನದೇ ಆದ ಪದ್ಧತಿಗಳು, ನಿಯಮಗಳು ಮತ್ತು ಚೌಕಟ್ಟಿನೊಳಗೆ ಬದುಕುತ್ತವೆ. ಈ ನಿಯಮಕ್ಕೆ ಬಂದಾಗ ಮುಟ್ಟಿನ ಮಹತ್ವವೂ ಇದೆ. ಮಹಿಳೆಯರಲ್ಲಿ ಮುಟ್ಟು ನೈಸರ್ಗಿಕ ಪ್ರಕ್ರಿಯೆ. ಪ್ರಾಚೀನ ಕಾಲದಿಂದಲೂ ಈ ಮುಟ್ಟಿನ ಬಗ್ಗೆ ಅನೇಕ ನಂಬಿಕೆಗಳು ಮತ್ತು ಪದ್ಧತಿಗಳಿವೆ.

ಹಿಂದೂ ಧರ್ಮದಲ್ಲಿ, ಮಹಿಳೆಯರು ಮುಟ್ಟಿನ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡದಿರುವುದು ಅಥವಾ ಪೂಜಾದಿ ಕಾರ್ಯಗಳಲ್ಲಿ ಭಾಗವಹಿಸದಿರುವುದು ವಾಡಿಕೆ. ಭಾರತ ಆಧುನಿಕತೆಯತ್ತ ಸಾಗುತ್ತಿದೆ. ಮುಟ್ಟಿನ ಬಗ್ಗೆ ಹಾಗೂ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಸಮಯದಲ್ಲಿಯೂ ಸಹ, ಅನೇಕ ಸ್ಥಳಗಳಲ್ಲಿ ತನ್ನ ಅವಧಿಯನ್ನ ಹೊಂದಿರುವ ಮಹಿಳೆಯನ್ನ ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಆಕೆಗೆ ಯಾವುದೇ ಸೌಲಭ್ಯಗಳನ್ನ ನೀಡುತ್ತಿಲ್ಲ. ದೇವಸ್ಥಾನ, ಪೂಜೆ, ನದಿಯಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಋತುಮತಿಯಾದ ಮಹಿಳೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಬಾರದು ಎಂಬ ವೈಜ್ಞಾನಿಕ ಕಾರಣಗಳನ್ನು ಇಲ್ಲಿ ತಿಳಿಯೋಣ.

ಮುಟ್ಟಿನ ಮಹಿಳೆಯರಿಗೆ ದೇವಾಲಯ ಪ್ರವೇಶವನ್ನ ಏಕೆ ನಿಷೇಧಿಸಲಾಗಿದೆ.?
ಮುಟ್ಟಿನ ಸಮಯದಲ್ಲಿ ದೇವಸ್ಥಾನಗಳು ಮತ್ತು ಪೂಜಾ ಸ್ಥಳಗಳಿಗೆ ಹೋಗುವುದನ್ನ ಹಿಂದೂ ಧರ್ಮ ನಿಷೇಧಿಸುತ್ತದೆ. ಇದು ಸಂಪೂರ್ಣ ಸತ್ಯ. ಅಡುಗೆ ಕೋಣೆಗೆ ಹೋಗಬಾರದು ಮತ್ತು ನದಿಯಲ್ಲಿ ಸ್ನಾನ ಮಾಡಬಾರದು ಎಂದು ಕೂಡ ಹೇಳಲಾಗುತ್ತದೆ. ಇದಕ್ಕೆ ಧಾರ್ಮಿಕ ಕಾರಣಗಳೇನೇ ಇರಲಿ, ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ಹಾರ್ಮೋನ್ ಬದಲಾವಣೆಗಳು. ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಹಾರ್ಮೋನುಗಳು ಬದಲಾಗುತ್ತವೆ. ಇದು ಆಕೆಯನ್ನ ಕೆರಳಿಸುತ್ತದೆ ಮತ್ತು ಕೋಪಗೊಳಿಸುತ್ತೆ. ಆಕೆಯ ಮನಸ್ಸು ನಕಾರಾತ್ಮಕತೆಯಿಂದ ತುಂಬುತ್ತದ ಎಂದು ನಂಬಲಾಗಿದೆ. ಹೀಗಾಗಿ ನದಿಯಲ್ಲಿ ಸ್ನಾನ ಮಾಡುವಾಗ ಅಪಘಾತಕ್ಕೀಡಾಗಿರಬಹುದು.

ಇನ್ನು ಸಾಮಾನ್ಯ ದಿನಕ್ಕಿಂತ ಸ್ವಲ್ಪ ವಿಭಿನ್ನ ಮನಸ್ಥಿತಿಯನ್ನ ಹೊಂದಿರುವುದು ಅಡುಗೆಮನೆಯಲ್ಲಿ ಅವ್ಯವಸ್ಥೆಗೆ ಕಾರಣವಾಗಬಹುದು. ಮೊದಲು ಹತ್ತಾರು ಮಂದಿಗೆ ಅಡುಗೆ ಮಾಡಬೇಕಿತ್ತು. ಪಿರಿಯಡ್ಸ್ ಸಮಯದಲ್ಲಿ ನಿಂತು ಅಡುಗೆ ಮಾಡುವುದು ಕಷ್ಟವಾಗಿತ್ತು. ಆದ್ದರಿಂದಲೇ ವಿಶ್ರಾಂತಿ ಪಡೆಯಲು, ಅಡುಗೆ ಕೋಣೆಗೆ ಬರಬೇಡಿ ಎಂದು ಹೇಳುತ್ತಿದ್ದರು. ಇನ್ನು ದೇವಾಲಯವು ಸಕಾರಾತ್ಮಕತೆಯಿಂದ ತುಂಬಿರುವ ಸ್ಥಳವಾಗಿದೆ. ದೇವಸ್ಥಾನಕ್ಕೆ ಹೋಗುವಾಗ ಮನಸ್ಸಿನಲ್ಲಿ ಸಕಾರಾತ್ಮಕತೆ ತುಂಬಿರಬೇಕು. ಆದರೆ ದೇವಸ್ಥಾನಕ್ಕೆ ಹೋದಾಗ ಸಿಟ್ಟಿಗೆದ್ದರೆ ನೆಮ್ಮದಿ ಸಿಗುವುದಿಲ್ಲ.

ಇಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ ಯಾವುದೇ ದೇವರನ್ನು ಪೂಜಿಸುವಾಗ ಕೀರ್ತನೆ ಮುಖ್ಯವಾಗಿತ್ತು. ಮಂತ್ರವನ್ನು ಪಠಿಸದೆ ಪೂಜೆ ಪೂರ್ಣಗೊಳ್ಳುವುದಿಲ್ಲ. ಮಂತ್ರವನ್ನ ಎಚ್ಚರಿಕೆಯಿಂದ ಪಠಿಸಬೇಕು. ಉಚ್ಚಾರಣೆಯಲ್ಲಿ ತಪ್ಪುಗಳನ್ನ ಮಾಡಬಾರದು. ಆದರೆ ಮುಟ್ಟಿನ ಸಮಯದಲ್ಲಿ ಮಹಿಳೆ, ಹೊಟ್ಟೆ ನೋವು ಮತ್ತು ಆಯಾಸವನ್ನ ಅನುಭವಿಸುತ್ತಾಳೆ. ಈ ಸಮಯದಲ್ಲಿ ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತು ಮಂತ್ರವನ್ನ ಜಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಪೂಜೆ ಮಾಡುವುದನ್ನ ನಿಷೇಧಿಸಲಾಗಿದೆ.

ದೇವಸ್ಥಾನಕ್ಕೆ ಹೋಗುವಾಗ ಪವಿತ್ರವಾಗಿರಬೇಕು ಎಂದು ನಾವು ನಂಬುತ್ತೇವೆ. ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನ ಧರಿಸುವಂತೆ ಸೂಚಿಸಲಾಗಿದೆ. ಆದರೆ ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸರಿಯಾದ ವ್ಯವಸ್ಥೆ ಇರಲಿಲ್ಲ. ಮುಟ್ಟಿನ ಸಮಯದಲ್ಲಿ ಸ್ನಾನ ಕೂಡ ಮಾಡುವುದಿಲ್ಲ. ಹಾಗಾಗಿ ದೇವಸ್ಥಾನಕ್ಕೆ ಬರದಂತೆ ಸೂಚಿಸಲಾಗಿದೆ. ಪೂಜೆ ಮಾಡುವಾಗ ಅಥವಾ ದೇವಸ್ಥಾನಕ್ಕೆ ಹೋಗುವಾಗ ನಿಮ್ಮ ಅವಧಿ ಬಂದರೆ ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ನಿಮಗೆ ಶಿಕ್ಷೆಯಾಗುವುದಿಲ್ಲ.

 

‘8 ಗಂಟೆ’ಗಳಿಗಿಂತ ಕಡಿಮೆ ‘ನಿದ್ರೆ’ ಮಾಡ್ತೀರಾ.? ಎಚ್ಚರ, ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ

BREAKING NEWS: ಹೊಸ ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕರಾಗಿ ಕಿರಣ್ ಕುಮಾರ್ ನೇಮಕ

BREAKING NEWS : ಚಿತ್ರೀಕರಣದ ವೇಳೆ ಬಾಲಿವುಡ್ ನಿರ್ದೇಶಕ ‘ರೋಹಿತ್ ಶೆಟ್ಟಿ’ಗೆ ಗಾಯ, ಆಸ್ಪತ್ರೆಗೆ ದಾಖಲು |Rohit Shetty Admitted To Hospita

Share.
Exit mobile version