ನವದೆಹಲಿ: ಹಿರಿಯ ರಾಜಕಾರಣಿ, ದೇಶದ ಮುತ್ಸದ್ಧಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ( Ex PM HD Devegowdha ) ಬಗ್ಗೆ, ನಮ್ಮ ಪಕ್ಷದ ನಾಯಕರಾದಂತ ರಾಜಣ್ಣ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಕೂಡಲೇ ಅವರು ಕ್ಷಮೆಯಾಚಿಸುವಂತೆ ಸೂಚಿಸುತ್ತೇನೆ. ಈ ಬಗ್ಗೆ ಪಕ್ಷದಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಖಡಕ್ ವಾರ್ನಿಂಗ್ ನೀಡಿದ್ದಾರೆ.

BIG NEWS: ಅನಾಗರಿಕ, ವಿಕೃತವಾಗಿ ಮಾತನಾಡಿರುವ ರಾಜಣ್ಣಗೆ ತಕ್ಕ ಪಾಠ ಕಲಿಸುತ್ತೇನೆ – ಮಾಜಿ ಸಿಎಂ HDK ಗುಡುಗು

ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇವತ್ತು ನಮ್ಮ ಪಕ್ಷದ ಒಬ್ಬ ನಾಯಕರಾದಂತ ರಾಜಣ್ಣನವರು, ನಮ್ಮ ರಾಜ್ಯದ ಹಿರಿಯ ರಾಜಕಾರಣಿಗಳ ಬಗ್ಗೆ ಮಾತನಾಡಿರುವಂತ ಮಾತು, ಇಡೀ ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ನಾನು ವೈಯಕ್ತಿಕವಾಗಿ ಒಬ್ಬ ಪಕ್ಷದ ನಾಯಕನಾಗಿ ಯಾರೇ ಒಬ್ಬ ನಾಯಕರು ಮಾನವೀಯತೆಯನ್ನು ಮೆರೆಯಬೇಕು. ಸಮಾಜಕ್ಕೆ, ದೇಶಕ್ಕೆ ಸೇವೆ ಸಲ್ಲಿಸಿದವರ ಬಗ್ಗೆ ಗೌರವ ಕೊಡಬೇಕು. ಅಂತಹ ವ್ಯಕ್ತಿಗಳ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದರು.

BIG NEWS: ದೇವೇಗೌಡರ ಬಗ್ಗೆ ನನ್ನ ಹೇಳಿಕೆಯಿಂದ ನೋವಾದಿದ್ದರೇ ವಿಷಾಧಿಸುವೆ – ಮಾಜಿ ಶಾಸಕ ಕೆಎನ್ ರಾಜಣ್ಣ

ನಾನು ಅವರಿಗೆ ಕರೆ ಮಾಡಿ ಕ್ಷಮೆಯಾಚಿಸುವಂತೆ ಸೂಚಿಸುತ್ತೇನೆ. ನಾನು ಕೂಡ ಈ ಸಂದರ್ಭದಲ್ಲಿ ಇದನ್ನು ಖಂಡಿಸುವೆ. ನಮ್ಮ ಆಂತರೀಕವಾಗಿ ಈ ಬಗ್ಗೆ ಚರ್ಚಿಸುತ್ತೇವೆ. ಇಂತಹ ಒಂದು ಹೇಳಿಕೆಗಳಿಗೆ ನಾವು ಅವಕಾಶ ನೀಡೋದಿಲ್ಲ. ನಮ್ಮ ಪೂಜ್ಯರಾದಂತ ಹಿರಿಯರಿಗೆ ಉತ್ತಮವಾದಂತ ಸೇವೆ, ಕೆಲಸ ಮಾಡುವಂತ ಅವಕಾಶ ಆ ದೇವರು ಕೊಡಲಿ ಎಂಬುದಾಗಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು.

Share.
Exit mobile version