ಬೆಂಗಳೂರು : ಮಕ್ಕಳ ಬಿಸಿಯೂಟದಲ್ಲೂ ಬಿಜೆಪಿ ಲೂಟಿಗೆ ಇಳಿದಿದೆ ಎಂದು ಕಾಂಗ್ರೆಸ್ ( Congress) ಟ್ವೀಟ್ ಮೂಲಕ ಕಿಡಿಕಾರಿದೆ.

ಸರ್ಕಾರ ಕಳಪೆ ಆಹಾರ ಸಾಮಗ್ರಿಗಳನ್ನು ನೀಡಿ, ಅನ್ನದ ಬದಲು ಅನ್ನದಲ್ಲಿ ಹುಳುಗಳನ್ನು ಕೊಡುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಮಿತಿ ಇಲ್ಲದಾಗಿದೆ , ಬೊಮ್ಮಾಯಿ ಅವರೇ, ಮಕ್ಕಳ ತಟ್ಟೆಯಲ್ಲಿನ ಹುಳುಗಳ ಹುಳುಕನ್ನ ಮುಚ್ಚಿಕೊಳ್ಳಲು ಶಾಲೆಗಳಿಗೆ ಬಣ್ಣ ಬಳಿಯಲು ಹೊರಟಿರಾ? ಎಂದು ಕಿಡಿಕಾರಿದೆ.

ಬಿಜೆಪಿಗರು ಯುದ್ಧ ಘೋಷಣೆ ಮಾಡಿದಾರಂತೆ, ಬಾಣ ಬಿಡ್ತಾರಂತೆ, ಕಾಂಗ್ರೆಸ್ಗೆ ತಾಕತ್ತಿದ್ದರೆ ತಡೆಯಬೇಕಂತೆ. ಬಿಜೆಪಿಗರ ಬಾಣ ಚಿಮ್ಮದೆ ಮುಗ್ಗುರಿಸಿ ಬೀಳುತ್ತಿದೆ, ಕಾರಣ ಬಿಜೆಪಿಗರಿಗೆ ಕಮಿಷನ್ ಬಿಲ್ ವಿದ್ಯೆ ಮಾತ್ರ ಗೊತ್ತು, ಅಸಲಿ ಬಿಲ್ ವಿದ್ಯೆಯಲ್ಲ! ಬಿಜೆಪಿ , ಇನ್ನೂ ಎಂತೆಂತಹ ಹಾಸ್ಯ ಪ್ರಸಂಗಗಳನ್ನು ಬಾಕಿ ಉಳಿಸಿದ್ದೀರಿ?! ಎಂದು ಕಿಡಿಕಾರಿದೆ.

Share.
Exit mobile version