ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 2022-23ನೇ ಸಾಲಿನ ಶಾಸನಶಾಸ್ತç ಡಿಪ್ಲೊಮಾ ತರಗತಿಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿಯಾದ ನೇ.ಭ. ರಾಮಲಿಂಗಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BREAKING NEWS: ಆ.15ರಂದು ಸರ್ಕಾರದಿಂದಲೇ ‘ಚಾಮರಾಜಪೇಟೆ ಈದ್ಗಾ ಮೈದಾನ’ದಲ್ಲಿ ‘ಧ್ವಜಾರೋಹಣ’ – ಸಚಿವ ಆರ್ ಅಶೋಕ್ ಘೋಷಣೆ

ಶಾಸನಗಳ ಲಿಪಿಗಳನ್ನು ಓದುವ ತರಬೇತಿ, ಶಾಸನಗಳ ಸಂಗ್ರಹ ವಿಧಾನ, ಅಧ್ಯಯನ, ಪ್ರಬಂಧ ರಚನೆ ಇತ್ಯಾದಿ ಮೌಲಿಕ ಅಂಶಗಳನ್ನು ತರಗತಿಗಳಲ್ಲಿ ಬೋಧಿಸಲಾಗುವುದು.

BREAKING NEWS: ಆ.15ರಂದು ಸರ್ಕಾರದಿಂದಲೇ ‘ಚಾಮರಾಜಪೇಟೆ ಈದ್ಗಾ ಮೈದಾನ’ದಲ್ಲಿ ‘ಧ್ವಜಾರೋಹಣ’ – ಸಚಿವ ಆರ್ ಅಶೋಕ್ ಘೋಷಣೆ

ಆಸಕ್ತರು ಶಾಸನಶಾಸ್ತ್ರ ಡಿಪ್ಲೊಮಾ ಕೋರ್ಸುಗಳ ನಿಯಮಾವಳಿ ಮತ್ತು ಅರ್ಜಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ಮಳಿಗೆಯಿಂದ ರೂ. 25/- ಶುಲ್ಕವನ್ನು ಸಲ್ಲಿಸಿ ದಿನಾಂಕ 10-08-2022ರಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-08-2022 ಮತ್ತು ದಂಡಶುಲ್ಕ ರೂ. 50/- ಸಹಿತ ದಿನಾಂಕ 15-09-2022 ಕೊನೆಯ ದಿನಾಂಕವಾಗಿದೆ.

BIG NEWS: ‘ಕರ್ನಾಟಕ ಎಸಿಬಿ’ ರದ್ದು, ಬಾಕಿ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾಯಿಸಿ ‘ಹೈಕೋರ್ಟ್’ ಮಹತ್ವದ ಆದೇಶ | HC abolishes Karnataka ACB

ಕೋರ್ಸ್ ಅವಧಿಯು 9 ತಿಂಗಳುಗಳದ್ದಾಗಿದ್ದು, ಹಾಜರಾತಿ ಕಡ್ಡಾಯವಾಗಿರುತ್ತದೆ. ವಾರಕ್ಕೆ 4 ದಿನ (ಮಂಗಳವಾರದಿಂದ ಶುಕ್ರವಾರದ ವರೆಗೆ) ಸಂಜೆ 6 ರಿಂದ 7 ಗಂಟೆ ವರೆಗೆ ತರಗತಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೇ ನಡೆಸಲಾಗುತ್ತದೆ.

ಶಿವಮೊಗ್ಗ: ಮೆಕ್ಕೆಜೋಳ ಬೆಳೆ ಹಾನಿ: ವೈಯಕ್ತಿಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಡಿಸಿ ಸೂಚನೆ

ಈ ಸಂಬಂಧ ಹೆಚ್ಚಿನ ವಿವರಗಳಿಗೆ ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು –560018. ಇವರನ್ನು ಮೊಬೈಲ್ ಸಂಖ್ಯೆ : 8660777643 ಮೂಲಕ ಸಂಪರ್ಕಿಸಬಹುದು.

Share.
Exit mobile version