ಬೆಂಗಳೂರು : ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ವಾಗ್ಧಾಳಿ ನಡೆಸಿದ್ದಾರೆ.

 ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಚಿವ ಡಾ.ಕೆ ಸುಧಾಕರ್ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

 ನಾನು ಸಿದ್ದರಾಮಣ್ಣನಷ್ಟು ಬುದ್ದಿವಂತನಲ್ಲ,  ಆದರೆ ಪ್ರಧಾನಿ ಸೀಟ್ ನಿಂದ ದೇವೇಗೌಡನ್ನು ಕೆಳಗಿಳಿಸಿದ್ದು ಕಾಂಗ್ರೆಸ್, ದೇವೇಗೌಡರು ರಷ್ಯಾದಲ್ಲಿದ್ದಾಗ ಪ್ರಧಾನಿ ಹುದ್ದೆಯಿಂದ ಕಾಂಗ್ರೆಸ್ ನವರು ಅವರನ್ನು ಕೆಳಗಿಳಿಸಿದರು. 26 ವರ್ಷ ಆಯಿತು ದೇವೇಗೌಡರನ್ನು ಇಳಿಸಿದ್ದಕ್ಕೆ ಕಾರಣವಿಲ್ಲ ಎಂದು ಗುಡುಗಿದ್ದಾರೆ.

ಪಿ.ವಿ ನರಸಿಂಹರಾವ್ ಗೆ ಕಾಂಗ್ರೆಸ್ ನವರು ಏನು ಮಾಡಿದ್ರು ? ಬಿ.ಎಸ್ ಯಡಿಯೂರಪ್ಪಗೆ ಇವರು ಏನು ಮಾಡಿದ್ರು ? ರಾಜಶೇಖರ ಮೂರ್ತಿಗೆ ಏನು ಮಾಡಿದ್ರು? ಕಾಂಗ್ರೆಸ್ ನಾಯಕರು ಇದಕ್ಕೆ ಉತ್ತರ ಕೊಡಲಿ ಎಂದು ಸಚಿವ ಡಾ,ಕೆ ಸುಧಾಕರ್ ಕಿಡಿಕಾರಿದ್ದಾರೆ.

BREAKING NEWS : ದೇಶದಲ್ಲಿ ‘ಡೆಂಗ್ಯೂ ಪ್ರಕರಣ’ ಹೆಚ್ಚಳದ ನಡುವೆ ‘ಹೊಸ ರೋಗ ಲಕ್ಷಣ’ ಪತ್ತೆ ; ಕಾಣಿಸಿಕೊಂಡ್ರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ |New Symptoms of Dengue

ಸುಪ್ರೀಂ ಕೋರ್ಟ್ ಕಲಾಪಗಳ ನೇರಪ್ರಸಾರದ ಬಗ್ಗೆ ಮಾಹಿತಿ ನೀಡಿದ ಸಿಜೆಐ ಯು.ಯು.ಲಲಿತ್

Share.
Exit mobile version