ಬೆಂಗಳೂರು: ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು. ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾಗ ನಾಗರಿಕರ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸುವಂತೆ ಬಿಬಿಎಂಪಿಗೆ ( BBMP ) ಆದೇಶಿಸಿದ್ದರು. ಆದರೆ ತಮ್ಮ ಸ್ವಂತ ಕಂಪನಿ ಎಂಬೆಸಿ ತೆರಿಗೆ ಬಾಕಿ ಇಟ್ಟುಕೊಂಡಿದ್ದರು ಎಂಬುದಾಗಿ ಬಿಜೆಪಿ ( BJP Karnataka ) ವಾಗ್ದಾಳಿ ನಡೆಸಿದೆ.
ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು.
ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾಗ ನಾಗರಿಕರ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲಿಸುವಂತೆ ಬಿಬಿಎಂಪಿಗೆ ಆದೇಶಿಸಿದ್ದರು.
ಆದರೆ ತಮ್ಮ ಸ್ವಂತ ಕಂಪನಿ ಎಂಬೆಸಿ ತೆರಿಗೆ ಬಾಕಿ ಇಟ್ಟುಕೊಂಡಿದ್ದರು!#ಅಲಿಬಾಬಾಮತ್ತುಕಾಂಗ್ರೆಸ್ಕಳ್ಳರು pic.twitter.com/bmjq5ItP4d
— BJP Karnataka (@BJP4Karnataka) July 9, 2022
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವಂತ ಕರ್ನಾಟಕ ಬಿಜೆಪಿ, ಒಬ್ಬ ಟಿಂಬರ್ ವ್ಯಾಪಾರಿ ಬೆಂಗಳೂರು ಅಭಿವೃದ್ಧಿ ಮಂತ್ರಿಯಾದರು. ಹೆಸರಿಗೆ ಮಾತ್ರ ಬೆಂಗಳೂರು ಅಭಿವೃದ್ಧಿ ಮಂತ್ರಿ, ಅಭಿವೃದ್ಧಿಯಾಗಿದ್ದು ಮಾತ್ರ ಜಾರ್ಜ್! ಅದೇ ಹಣಭಕ್ಷಕ ಜಾರ್ಜ್ ಈಗ ಕಾಂಗ್ರೆಸ್ ಪಕ್ಷದ ಹಣಕಾಸು ಸಂಚಾಲಕ. ಬೇನಾಮಿ ಹಣದ ಲೆಕ್ಕಿಡುವುದರಲ್ಲಿ ಜಾರ್ಜ್ಗೆ ಸರಿಸಾಟಿ ಬೇರೆ ಯಾರೂ ಇಲ್ಲ ಬಿಡಿ ಎಂದು ಹೇಳಿದೆ.
ಒಬ್ಬ ಟಿಂಬರ್ ವ್ಯಾಪಾರಿ ಬೆಂಗಳೂರು ಅಭಿವೃದ್ಧಿ ಮಂತ್ರಿಯಾದರು. ಹೆಸರಿಗೆ ಮಾತ್ರ ಬೆಂಗಳೂರು ಅಭಿವೃದ್ಧಿ ಮಂತ್ರಿ, ಅಭಿವೃದ್ಧಿಯಾಗಿದ್ದು ಮಾತ್ರ ಜಾರ್ಜ್!
ಅದೇ ಹಣಭಕ್ಷಕ ಜಾರ್ಜ್ ಈಗ ಕಾಂಗ್ರೆಸ್ ಪಕ್ಷದ ಹಣಕಾಸು ಸಂಚಾಲಕ. ಬೇನಾಮಿ ಹಣದ ಲೆಕ್ಕಿಡುವುದರಲ್ಲಿ ಜಾರ್ಜ್ಗೆ ಸರಿಸಾಟಿ ಬೇರೆ ಯಾರೂ ಇಲ್ಲ ಬಿಡಿ!#ಅಲಿಬಾಬಾಮತ್ತುಕಾಂಗ್ರೆಸ್ಕಳ್ಳರು
— BJP Karnataka (@BJP4Karnataka) July 9, 2022
ಕೆಪಿಸಿಸಿಯ ಹಣಕಾಸು ಸಮಿತಿಗೆ ಕೆ.ಜೆ. ಜಾರ್ಜ್ ಹಾಗೂ ವಿನಯ್ ಕಾರ್ತಿಕ್ ಅವರನ್ನು ನೇಮಕ ಮಾಡಲಾಗಿದೆ. ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬೇನಾಮಿ ಆಸ್ತಿಯ ಸೂತ್ರದಾರರು ಇವರೇ ಅಲ್ಲವೇ? ಪಕ್ಷದಲ್ಲಿ ಅಕ್ರಮ ಆಸ್ತಿಯ ಸಮಾನ ಹಂಚಿಕೆ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದೆ.
ಕೆಪಿಸಿಸಿಯ ಹಣಕಾಸು ಸಮಿತಿಗೆ ಕೆ.ಜೆ. ಜಾರ್ಜ್ ಹಾಗೂ ವಿನಯ್ ಕಾರ್ತಿಕ್ ಅವರನ್ನು ನೇಮಕ ಮಾಡಲಾಗಿದೆ.
ವಿಪಕ್ಷ ನಾಯಕ @siddaramaiah ಹಾಗೂ ಕೆಪಿಸಿಸಿ ಅಧ್ಯಕ್ಷ @DKShivakumar ಅವರ ಬೇನಾಮಿ ಆಸ್ತಿಯ ಸೂತ್ರದಾರರು ಇವರೇ ಅಲ್ಲವೇ?
ಪಕ್ಷದಲ್ಲಿ ಅಕ್ರಮ ಆಸ್ತಿಯ ಸಮಾನ ಹಂಚಿಕೆ ನಡೆಯುತ್ತಿದೆಯೇ?#ಅಲಿಬಾಬಾಮತ್ತುಕಾಂಗ್ರೆಸ್ಕಳ್ಳರು
— BJP Karnataka (@BJP4Karnataka) July 9, 2022