BREAKING: 30,000 ಲಂಚ ಸ್ವೀಕರಿಸುತ್ತಿದ್ದ ಜೆಇ ಲೋಕಾಯುಕ್ತ ಬಲೆಗೆ

ಶಿವಮೊಗ್ಗ: ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರಿಂದ 30,000 ಲಂಚ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿ ಜೆಇ ಒಬ್ಬರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದ ಗ್ರಾಮೀಣಾಭಿವೃದ್ಧಿ ಇಲಾಖೆಯ ಜೆಇ ಪುರುಷೋತ್ತಮ್ ಎಂಬುವರೇ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ರಸ್ತೆ ಕಾಮಗಾರಿ ಬಿಲ್ ಮಂಜೂರಾತಿಗಾಗಿ ಶೇ.3ರಷ್ಟು ಲಂಚಕ್ಕೆ ಗುತ್ತಿಗಾರ ಲಿಂಗರಾಜುಗೆ ಬೇಡಿಕೆ ಇಟ್ಟಿದ್ದರು. 77.59 ಲಕ್ಷ ವೆಚ್ಚದ ಕಾಮಗಾರಿ ನಡೆಸಿದ್ದಂತ ಗುತ್ತಿಗೆದಾರ ಲಿಂಗರಾಜು ಈಗಾಗಲೇ ಬಿಲ್ ಮಂಜೂರಾತಿಗಾಗಿ 1.63 ಲಕ್ಷ ಲಂಚವನ್ನು ಜೆಇ ಪುರುಷೋತ್ತಮ್ ಗೆ … Continue reading BREAKING: 30,000 ಲಂಚ ಸ್ವೀಕರಿಸುತ್ತಿದ್ದ ಜೆಇ ಲೋಕಾಯುಕ್ತ ಬಲೆಗೆ