ದಾವಣಗೆರೆ : ರಾಜ್ಯದ ಅಂಗನವಾಡಿ ಶಿಕ್ಷಕಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಎಸ್‌ ಎಸ್‌ ಎಲ್‌ ಸಿ ಪಾಸಾದ ಅಭ್ಯರ್ಥಿಗಳು ದೂರ ಶಿಕ್ಷಣದಲ್ಲಿ ನೇರವಾಗಿ ಪಿಯುಸಿ, ಡಿಗ್ರಿ ಪರೀಕ್ಷೆ ಕಟ್ಟಲು ಅವಕಾಶ ಮಾಡಿಕೊಟ್ಟಿದೆ.

ಕರ್ನಾಟಕ ರಾಜ್ಯದಲ್ಲಿರುವ ಅಂಗನವಾಡಿಗಳು ಮತ್ತು ಶಿಶು ವಿಹಾರಗಳು ಮತ್ತು ಬಾಲಮಂದಿರಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್‍ಎಸ್‍ಎಲ್‍ಸಿ ಪಾಸಾದ ಅಭ್ಯರ್ಥಿಗಳಿಗೆ ದೂರ ಶಿಕ್ಷಣದಲ್ಲಿ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟಲು ಮತ್ತು ದ್ವಿತೀಯ ಪಿಯುಸಿ ಪಾಸಾದವರಿಗೆ ಬಿ.ಎ. , ಬಿ.ಕಾಂ., ಬಿ.ಎಸ್ಸಿ, ಪರೀಕ್ಷೆಗಳನ್ನು ಬರೆಯಲು ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಪಿಯುಸಿ ಮತ್ತು ಪದವಿ ಪರೀಕ್ಷೆಗಳನ್ನು ಬರೆಯಲು ಆಸಕ್ತ ಶಿಕ್ಷಕಿಯರು ಕನಕ ಕರೆಸ್ಟಾಂಡೆನ್ಸ್ ಕಾಲೇಜು, 2ನೇ ಮಹಡಿ, ಕುರುಬರ ಹಾಸ್ಟೆಲ್ ಕಾಂಪ್ಲೆಕ್ಸ್, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ ಇಲ್ಲಿನ ವಿಳಾಸಕ್ಕೆ ಅಥವಾ ಮೊ. 7022936433, 9886678178 ಸಂಪರ್ಕಿಸಿ ಮಾಹಿತಿ ಪಡೆಯಲು ತಿಳಿಸಲಾಗಿದೆ.

Share.
Exit mobile version